<p><strong>ಇಸ್ಲಾಮಾಬಾದ್:</strong> ‘ಭಾರತದ 26ಕ್ಕೂ ಹೆಚ್ಚು ಸೇನಾ ನೆಲೆಗಳ ಮೇಲೆ ನಾವು ನಡೆಸಿದ ದಾಳಿ ಯಶಸ್ವಿಯಾಗಿತ್ತು. ಈ ಬಳಿಕ ಆ ದೇಶವು ಅಮೆರಿಕದ ನಾಯಕತ್ವದ ಬಳಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಕೊಳ್ಳುವಂತೆ ಮನವಿ ಮಾಡಿತು. ಪ್ರಾದೇಶಿಕ ಶಾಂತಿಗಾಗಿ ನಾವೂ ಇದಕ್ಕೆ ಒಪ್ಪಿದೆವು’ ಎಂದು ಪಾಕಿಸ್ತಾನದ ಸೇನಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಹೇಳಿದರು.</p>.<p>‘ಕದನ ವಿರಾಮ ಮಾತುಕತೆಯಲ್ಲಿ ಯಾವ ದೇಶವೂ ಮಧ್ಯಸ್ಥಿಕೆ ವಹಿಸಿಕೊಂಡಿರಲಿಲ್ಲ. ಪಾಕಿಸ್ತಾನ ಮತ್ತು ಭಾರತದ ಮಧ್ಯೆಯೇ ನೇರ ಮಾತುಕತೆ ನಡೆದಿತ್ತು’ ಎಂದು ಭಾರತ ಹೇಳುತ್ತಲೇ ಬಂದಿದೆ.</p>.<p>ಪಹಲ್ಗಾಮ್ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ವಿರುದ್ಧ ‘ಮರ್ಕಾ–ಎ–ಹಕ್’ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಗೆ ಒಂದು ವರ್ಷ ತುಂಬಿದ ಸಲುವಾಗಿ ರಾವಲ್ಪಿಂಡಿಯಲ್ಲಿನ ಸೇನಾ ಮುಖ್ಯ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ದಾಳಿಗಳಿಂದ ಭಾರತದ ಹಲವರು ಮೃತಪಟ್ಟರು ಮತ್ತು ಆ ದೇಶವು ಆರ್ಥಿಕ ನಷ್ಟವನ್ನೂ ಅನುಭವಿಸಿತು. ಮುಂದಿನ ಹಲವು ವರ್ಷಗಳವರೆಗೆ ಭಾರತವು ಇದರ ಬೆಲೆಯನ್ನು ತೆರುತ್ತಲೇ ಇರುತ್ತದೆ. ಭಾರತದ ವಿರುದ್ಧದ ಸಂಘರ್ಷದಲ್ಲಿ ಪಾಕಿಸ್ತಾನದ ತಂತ್ರಗಾರಿಕೆಯು ಶಕ್ತಿಯುತವಾಗಿತ್ತು’ ಎಂದರು.</p>.<p>‘ಕಳೆದ ವರ್ಷ ಮೇ 6, 7 ಮತ್ತು 10ರಂದು ಭಾರತವು ನಮ್ಮ ಸಾರ್ವಭೌಮತ್ವ ಮತ್ತು ಭೂಪ್ರದೇಶವನ್ನು ಉಲ್ಲಂಘಿಸಿತ್ತು. ಇದಕ್ಕೆ ನಾವು ರಾಷ್ಟ್ರೀಯ ಏಕತೆ ಮತ್ತು ಸೇನಾ ಪಡೆಗಳ ಸಂಪೂರ್ಣ ಬಲದೊಂದಿಗೆ ಪ್ರತಿಕ್ರಿಯೆ ನೀಡಿದೆವು. ಈ ಸಂಘರ್ಷವು ಸಾಂಪ್ರದಾಯಿಕ ಯುದ್ಧ ಮಾತ್ರವೇ ಆಗಿರಲಿಲ್ಲ. ಇದು ಎರಡು ಸಿದ್ಧಾಂತಗಳ ಮಧ್ಯದ ಹೋರಾಟವಾಗಿತ್ತು’ ಎಂದರು.</p>.<p><strong>‘ಕಾಶ್ಮೀರ ಇಲ್ಲದೆ ನಾವು ಅಪೂರ್ಣ’</strong></p><p>‘ಕಾಶ್ಮೀರವು ಒಳಗೊಳ್ಳದ ಪಾಕಿಸ್ತಾನದ ಎಲ್ಲ ಕತೆಗಳೂ<br>ಅಪೂರ್ಣವಾಗುತ್ತವೆ. ವಿಶ್ವ ಸಂಸ್ಥೆಯ ನಿರ್ಣಯ ಮತ್ತು ಕಾಶ್ಮೀರಿ ಜನರ ಆಶೋತ್ತರಗಳನ್ನು ಪರಿಗಣಿಸಿ ಮಾಡುವ ಪರಿಹಾರೋಪಾಯಗಳು ಮಾತ್ರವೇ ಕಾಶ್ಮೀರ ವಿವಾದವನ್ನು ಬಗೆಹರಿಸಲು ಸಾಧ್ಯ’ ಎಂದು ಅಸೀಮ್ ಮುನೀರ್ ಹೇಳಿದರು.</p><p>‘ಭಾರತದ ಹಿಂಸೆ ಮತ್ತು ಕ್ರೌರ್ಯದಿಂದ ಮುಕ್ತಿ ಪಡೆಯುವುದಕ್ಕೆ ಈ ವಿವಾದ ಬಗೆಹರಿಯುವುದು ಅಗತ್ಯವಾಗಿದೆ. ಸಾಮಾಜಿಕ ಸ್ಥಿತಿಗತಿಯನ್ನು ಬದಲಿಸಿ ಭಾರತದ ಆಕ್ರಮಿತ ಕಾಶ್ಮೀರದ ಚಿತ್ರಣವನ್ನು ಬೇರೆ ಮಾಡಲು ಸಾಧ್ಯವಿಲ್ಲ. ಈ ಜನರ ಹಕ್ಕುಗಳಿಗಾಗಿ ನಾವು ಧ್ವನಿ ಎತ್ತುತ್ತಲೇ ಇರುತ್ತೇವೆ. ನಮ್ಮ ರಾಜಕೀಯ ಮತ್ತು ನೈತಿಕ ಬೆಂಬಲವು ಕಾಶ್ಮೀರದ ಜನರಿಗೆ ಇದ್ದೇ ಇರುತ್ತದೆ’ ಎಂದೂ ಹೇಳಿದರು.</p>.<div><blockquote>ಭಾರತದ ವಿರುದ್ಧದ ಕಾರ್ಯಾಚರಣೆಯು ನಮ್ಮ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ಮಹತ್ವವನ್ನು ಹೆಚ್ಚಿಸಿತು. ಜಗತ್ತು ಈಗ ನಮ್ಮನ್ನು ಅಜೇಯ ಶಕ್ತಿಯಾಗಿ ನೋಡುತ್ತಿದೆ </blockquote><span class="attribution">ಅಸೀಮ್ ಮುನೀರ್, ಪಾಕಿಸ್ತಾನದ ಸೇನಾ ಪಡೆಗಳ ಮುಖ್ಯಸ್ಥ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260511-51-941672168</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್:</strong> ‘ಭಾರತದ 26ಕ್ಕೂ ಹೆಚ್ಚು ಸೇನಾ ನೆಲೆಗಳ ಮೇಲೆ ನಾವು ನಡೆಸಿದ ದಾಳಿ ಯಶಸ್ವಿಯಾಗಿತ್ತು. ಈ ಬಳಿಕ ಆ ದೇಶವು ಅಮೆರಿಕದ ನಾಯಕತ್ವದ ಬಳಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಕೊಳ್ಳುವಂತೆ ಮನವಿ ಮಾಡಿತು. ಪ್ರಾದೇಶಿಕ ಶಾಂತಿಗಾಗಿ ನಾವೂ ಇದಕ್ಕೆ ಒಪ್ಪಿದೆವು’ ಎಂದು ಪಾಕಿಸ್ತಾನದ ಸೇನಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಹೇಳಿದರು.</p>.<p>‘ಕದನ ವಿರಾಮ ಮಾತುಕತೆಯಲ್ಲಿ ಯಾವ ದೇಶವೂ ಮಧ್ಯಸ್ಥಿಕೆ ವಹಿಸಿಕೊಂಡಿರಲಿಲ್ಲ. ಪಾಕಿಸ್ತಾನ ಮತ್ತು ಭಾರತದ ಮಧ್ಯೆಯೇ ನೇರ ಮಾತುಕತೆ ನಡೆದಿತ್ತು’ ಎಂದು ಭಾರತ ಹೇಳುತ್ತಲೇ ಬಂದಿದೆ.</p>.<p>ಪಹಲ್ಗಾಮ್ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ಮೇಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ವಿರುದ್ಧ ‘ಮರ್ಕಾ–ಎ–ಹಕ್’ ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಗೆ ಒಂದು ವರ್ಷ ತುಂಬಿದ ಸಲುವಾಗಿ ರಾವಲ್ಪಿಂಡಿಯಲ್ಲಿನ ಸೇನಾ ಮುಖ್ಯ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ದಾಳಿಗಳಿಂದ ಭಾರತದ ಹಲವರು ಮೃತಪಟ್ಟರು ಮತ್ತು ಆ ದೇಶವು ಆರ್ಥಿಕ ನಷ್ಟವನ್ನೂ ಅನುಭವಿಸಿತು. ಮುಂದಿನ ಹಲವು ವರ್ಷಗಳವರೆಗೆ ಭಾರತವು ಇದರ ಬೆಲೆಯನ್ನು ತೆರುತ್ತಲೇ ಇರುತ್ತದೆ. ಭಾರತದ ವಿರುದ್ಧದ ಸಂಘರ್ಷದಲ್ಲಿ ಪಾಕಿಸ್ತಾನದ ತಂತ್ರಗಾರಿಕೆಯು ಶಕ್ತಿಯುತವಾಗಿತ್ತು’ ಎಂದರು.</p>.<p>‘ಕಳೆದ ವರ್ಷ ಮೇ 6, 7 ಮತ್ತು 10ರಂದು ಭಾರತವು ನಮ್ಮ ಸಾರ್ವಭೌಮತ್ವ ಮತ್ತು ಭೂಪ್ರದೇಶವನ್ನು ಉಲ್ಲಂಘಿಸಿತ್ತು. ಇದಕ್ಕೆ ನಾವು ರಾಷ್ಟ್ರೀಯ ಏಕತೆ ಮತ್ತು ಸೇನಾ ಪಡೆಗಳ ಸಂಪೂರ್ಣ ಬಲದೊಂದಿಗೆ ಪ್ರತಿಕ್ರಿಯೆ ನೀಡಿದೆವು. ಈ ಸಂಘರ್ಷವು ಸಾಂಪ್ರದಾಯಿಕ ಯುದ್ಧ ಮಾತ್ರವೇ ಆಗಿರಲಿಲ್ಲ. ಇದು ಎರಡು ಸಿದ್ಧಾಂತಗಳ ಮಧ್ಯದ ಹೋರಾಟವಾಗಿತ್ತು’ ಎಂದರು.</p>.<p><strong>‘ಕಾಶ್ಮೀರ ಇಲ್ಲದೆ ನಾವು ಅಪೂರ್ಣ’</strong></p><p>‘ಕಾಶ್ಮೀರವು ಒಳಗೊಳ್ಳದ ಪಾಕಿಸ್ತಾನದ ಎಲ್ಲ ಕತೆಗಳೂ<br>ಅಪೂರ್ಣವಾಗುತ್ತವೆ. ವಿಶ್ವ ಸಂಸ್ಥೆಯ ನಿರ್ಣಯ ಮತ್ತು ಕಾಶ್ಮೀರಿ ಜನರ ಆಶೋತ್ತರಗಳನ್ನು ಪರಿಗಣಿಸಿ ಮಾಡುವ ಪರಿಹಾರೋಪಾಯಗಳು ಮಾತ್ರವೇ ಕಾಶ್ಮೀರ ವಿವಾದವನ್ನು ಬಗೆಹರಿಸಲು ಸಾಧ್ಯ’ ಎಂದು ಅಸೀಮ್ ಮುನೀರ್ ಹೇಳಿದರು.</p><p>‘ಭಾರತದ ಹಿಂಸೆ ಮತ್ತು ಕ್ರೌರ್ಯದಿಂದ ಮುಕ್ತಿ ಪಡೆಯುವುದಕ್ಕೆ ಈ ವಿವಾದ ಬಗೆಹರಿಯುವುದು ಅಗತ್ಯವಾಗಿದೆ. ಸಾಮಾಜಿಕ ಸ್ಥಿತಿಗತಿಯನ್ನು ಬದಲಿಸಿ ಭಾರತದ ಆಕ್ರಮಿತ ಕಾಶ್ಮೀರದ ಚಿತ್ರಣವನ್ನು ಬೇರೆ ಮಾಡಲು ಸಾಧ್ಯವಿಲ್ಲ. ಈ ಜನರ ಹಕ್ಕುಗಳಿಗಾಗಿ ನಾವು ಧ್ವನಿ ಎತ್ತುತ್ತಲೇ ಇರುತ್ತೇವೆ. ನಮ್ಮ ರಾಜಕೀಯ ಮತ್ತು ನೈತಿಕ ಬೆಂಬಲವು ಕಾಶ್ಮೀರದ ಜನರಿಗೆ ಇದ್ದೇ ಇರುತ್ತದೆ’ ಎಂದೂ ಹೇಳಿದರು.</p>.<div><blockquote>ಭಾರತದ ವಿರುದ್ಧದ ಕಾರ್ಯಾಚರಣೆಯು ನಮ್ಮ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ಮಹತ್ವವನ್ನು ಹೆಚ್ಚಿಸಿತು. ಜಗತ್ತು ಈಗ ನಮ್ಮನ್ನು ಅಜೇಯ ಶಕ್ತಿಯಾಗಿ ನೋಡುತ್ತಿದೆ </blockquote><span class="attribution">ಅಸೀಮ್ ಮುನೀರ್, ಪಾಕಿಸ್ತಾನದ ಸೇನಾ ಪಡೆಗಳ ಮುಖ್ಯಸ್ಥ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260511-51-941672168</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>