<p><strong>ವೆಲ್ಲಿಂಗ್ಟನ್:</strong> ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹಂತಕರಲ್ಲಿ ಒಬ್ಬನಾಗಿದ್ದ ಸತ್ವಂತ್ ಸಿಂಗ್ ವಂಶಸ್ಥನೊಬ್ಬ ನ್ಯೂಜಿಲೆಂಡ್ನ ಮಾದಕ ವಸ್ತು ಪ್ರಕರಣದಲ್ಲಿ ಜೈಲು ಸೇರಿದ್ದು, ತನ್ನ ಹೆಸರು ಮುಚ್ಚಿಡಲು ನಡೆಸಿದ ಕಾನೂನು ಹೋರಾಟದಲ್ಲಿ ವಿಫಲನಾಗಿದ್ದಾನೆ.</p>.<p>ಬಲ್ತೇಜ್ ಸಿಂಗ್ ತನ್ನ ಹೆಸರನ್ನು ಗೋಪ್ಯವಾಗಿಡಲು ಪ್ರಯತ್ನಿಸಿದ್ದ ಎಂದು ನ್ಯೂಜಿಲೆಂಡ್ನ ‘ಸ್ಟಫ್’ ವೆಬ್ ಪೋರ್ಟಲ್ ವರದಿ ಮಾಡಿದೆ.</p>.<p>ಈತ 700 ಕೆ.ಜಿ. ಮೆಥಾಂಫೆಟಮೈನ್ ಮಾದಕ ವಸ್ತುವನ್ನು ಆಮದು ಮಾಡಿಕೊಂಡ ಪ್ರಕರಣದಲ್ಲಿ 22 ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದಾನೆ. ತನ್ನ ಹೆಸರನ್ನು ಶಾಶ್ವತವಾಗಿ ರಹಸ್ಯವಾಗಿಡಲು ಈತ ಕಾನೂನು ಹೋರಾಟ ನಡೆಸುತ್ತಿದ್ದ. </p>.<p>1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು, ಅವರ ಅಂಗರಕ್ಷಕನಾಗಿದ್ದ ಸತ್ವಂತ್ ಸಿಂಗ್ ಹತ್ಯೆ ಮಾಡಿದ್ದ. ಈತನ ವಂಶಸ್ಥ ಬಲ್ತೇಜ್ ಸಿಂಗ್. ಆಕ್ಲೆಂಡ್ನಲ್ಲಿ ಈತ ಉದ್ಯಮಿಯಾಗಿದ್ದ.</p>.<p>ತನ್ನ ಗುರುತು ಪತ್ತೆಯಾದರೆ ಕುಟುಂಬ ಗಂಭೀರ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ನಲ್ಲಿ ವಾದ ಮಾಡಿ, ಹೆಸರನ್ನು ಮುಚ್ಚಿಡಲು ಅನುಮತಿ ಪಡೆದಿದ್ದ. ನ್ಯೂಜಿಲೆಂಡ್ ಪೊಲೀಸರು ಈ ಕುರಿತು ಮೇಲ್ಮನವಿ ಸಲ್ಲಿಸಿದ್ದರು.</p>.<p>ಸಿಂಗ್ ಗುರುತನ್ನು ಈಗಾಗಲೇ ಭಾರತದ ಮಾಧ್ಯಮಗಳು ಬಹಿರಂಗಪಡಿಸಿವೆ ಎಂದು ಅರ್ಜಿದಾರರು ವಾದಿಸಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಸಿಂಗ್ ಮನವಿ ತಿರಸ್ಕೃತಗೊಂಡಿದ್ದು, ಮಾಧ್ಯಮಗಳು ಆತನ ಹೆಸರು ಪ್ರಕಟಿಸಬಹುದಾಗಿದೆ.</p>.<p>ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ‘ನನ್ನ ಕುಟುಂಬ ಸಿಖ್ ಮತ್ತು ಹಿಂದೂ ಸಮುದಾಯದಲ್ಲಿ ಕುಖ್ಯಾತಿಗೆ ಒಳಗಾಗಿದೆ. ಇದು ಹಿಂಸೆ, ಬೆದರಿಕೆ ಮತ್ತು ಭೀತಿ ಉಂಟು ಮಾಡುವುದಕ್ಕೂ ಕಾರಣ ಆಗಬಹುದು’ ಎಂದು ಬಲ್ತೇಜ್ ಸಿಂಗ್ ತಂದೆ ಹೇಳಿಕೊಂಡಿದ್ದರು.</p>.<p>ಇಂದಿರಾಗಾಂಧಿ ಅವರ ಹತ್ಯೆ ನಂತರ ದೆಹಲಿಯಲ್ಲಿ ಗಲಭೆ ಉಂಟಾಗಿ, ಸಿಖ್ ಸಮುದಾಯದ ಹಲವರ ಹತ್ಯೆಗಳು ನಡೆದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೆಲ್ಲಿಂಗ್ಟನ್:</strong> ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹಂತಕರಲ್ಲಿ ಒಬ್ಬನಾಗಿದ್ದ ಸತ್ವಂತ್ ಸಿಂಗ್ ವಂಶಸ್ಥನೊಬ್ಬ ನ್ಯೂಜಿಲೆಂಡ್ನ ಮಾದಕ ವಸ್ತು ಪ್ರಕರಣದಲ್ಲಿ ಜೈಲು ಸೇರಿದ್ದು, ತನ್ನ ಹೆಸರು ಮುಚ್ಚಿಡಲು ನಡೆಸಿದ ಕಾನೂನು ಹೋರಾಟದಲ್ಲಿ ವಿಫಲನಾಗಿದ್ದಾನೆ.</p>.<p>ಬಲ್ತೇಜ್ ಸಿಂಗ್ ತನ್ನ ಹೆಸರನ್ನು ಗೋಪ್ಯವಾಗಿಡಲು ಪ್ರಯತ್ನಿಸಿದ್ದ ಎಂದು ನ್ಯೂಜಿಲೆಂಡ್ನ ‘ಸ್ಟಫ್’ ವೆಬ್ ಪೋರ್ಟಲ್ ವರದಿ ಮಾಡಿದೆ.</p>.<p>ಈತ 700 ಕೆ.ಜಿ. ಮೆಥಾಂಫೆಟಮೈನ್ ಮಾದಕ ವಸ್ತುವನ್ನು ಆಮದು ಮಾಡಿಕೊಂಡ ಪ್ರಕರಣದಲ್ಲಿ 22 ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದಾನೆ. ತನ್ನ ಹೆಸರನ್ನು ಶಾಶ್ವತವಾಗಿ ರಹಸ್ಯವಾಗಿಡಲು ಈತ ಕಾನೂನು ಹೋರಾಟ ನಡೆಸುತ್ತಿದ್ದ. </p>.<p>1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು, ಅವರ ಅಂಗರಕ್ಷಕನಾಗಿದ್ದ ಸತ್ವಂತ್ ಸಿಂಗ್ ಹತ್ಯೆ ಮಾಡಿದ್ದ. ಈತನ ವಂಶಸ್ಥ ಬಲ್ತೇಜ್ ಸಿಂಗ್. ಆಕ್ಲೆಂಡ್ನಲ್ಲಿ ಈತ ಉದ್ಯಮಿಯಾಗಿದ್ದ.</p>.<p>ತನ್ನ ಗುರುತು ಪತ್ತೆಯಾದರೆ ಕುಟುಂಬ ಗಂಭೀರ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ನಲ್ಲಿ ವಾದ ಮಾಡಿ, ಹೆಸರನ್ನು ಮುಚ್ಚಿಡಲು ಅನುಮತಿ ಪಡೆದಿದ್ದ. ನ್ಯೂಜಿಲೆಂಡ್ ಪೊಲೀಸರು ಈ ಕುರಿತು ಮೇಲ್ಮನವಿ ಸಲ್ಲಿಸಿದ್ದರು.</p>.<p>ಸಿಂಗ್ ಗುರುತನ್ನು ಈಗಾಗಲೇ ಭಾರತದ ಮಾಧ್ಯಮಗಳು ಬಹಿರಂಗಪಡಿಸಿವೆ ಎಂದು ಅರ್ಜಿದಾರರು ವಾದಿಸಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಸಿಂಗ್ ಮನವಿ ತಿರಸ್ಕೃತಗೊಂಡಿದ್ದು, ಮಾಧ್ಯಮಗಳು ಆತನ ಹೆಸರು ಪ್ರಕಟಿಸಬಹುದಾಗಿದೆ.</p>.<p>ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ‘ನನ್ನ ಕುಟುಂಬ ಸಿಖ್ ಮತ್ತು ಹಿಂದೂ ಸಮುದಾಯದಲ್ಲಿ ಕುಖ್ಯಾತಿಗೆ ಒಳಗಾಗಿದೆ. ಇದು ಹಿಂಸೆ, ಬೆದರಿಕೆ ಮತ್ತು ಭೀತಿ ಉಂಟು ಮಾಡುವುದಕ್ಕೂ ಕಾರಣ ಆಗಬಹುದು’ ಎಂದು ಬಲ್ತೇಜ್ ಸಿಂಗ್ ತಂದೆ ಹೇಳಿಕೊಂಡಿದ್ದರು.</p>.<p>ಇಂದಿರಾಗಾಂಧಿ ಅವರ ಹತ್ಯೆ ನಂತರ ದೆಹಲಿಯಲ್ಲಿ ಗಲಭೆ ಉಂಟಾಗಿ, ಸಿಖ್ ಸಮುದಾಯದ ಹಲವರ ಹತ್ಯೆಗಳು ನಡೆದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>