<p><strong>ಟೆಹರಾನ್, ನವದೆಹಲಿ:</strong> ‘ಯುದ್ಧ ಅಂತ್ಯಗೊಳಿಸಲು ಅಮೆರಿಕದೊಂದಿಗೆ ಮಾತುಕತೆ ಮುಂದುವರಿಯಬೇಕು ಎಂದಾದರೆ, ಕತಾರ್ನಲ್ಲಿ ಇರಿಸಲಾಗಿರುವ ಮುಟ್ಟುಗೋಲು ಹಾಕಿಕೊಂಡಿರುವ ನಮ್ಮ 12 ಬಿಲಿಯನ್ ಡಾಲರ್ (ಸುಮಾರು ₹1.14 ಲಕ್ಷ ಕೋಟಿ) ಅನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಇರಾನ್ ಹೇಳಿದೆ.</p>.<p>ಇರಾನ್ನ ತಸ್ನಿಮ್ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಇರಾನ್ನ ಕೇಂದ್ರೀಯ ಬ್ಯಾಂಕ್ನ ಗವರ್ನರ್ ಸೇರಿದ ನಿಯೋಗವು ಸೋಮವಾರ ದೋಹಾ ತಲುಪಿದೆ.</p>.<p>‘ಮಾತುಕತೆ ಆರಂಭಿಸಲು ಇದು ಮೊದಲ ಹಂತವಾಗಲಿದೆ. ಹಣ ಬಿಡುಗಡೆಯಾಗುವುದು ಮಾತ್ರವಲ್ಲ, ಆ ಹಣವು ನಮಗೆ ತಲುಪಬೇಕು. ಹಣ ಬಿಡುಗಡೆ ಮಾತ್ರವೇ ಒಪ್ಪಂದಕ್ಕೆ ಬರಲು ನಾವು ಮುಂದಿಡುತ್ತಿರುವ ಷರತ್ತು ಅಲ್ಲ. ಇದೊಂದು ಭಾಗವಷ್ಟೆ ಎಂದು ಇರಾನ್ ಮೂಲಗಳು ಹೇಳಿವೆ’ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.</p>.<p>‘ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ನ ಹಣ ಬಿಡುಗಡೆ ಮತ್ತು ಇರಾನ್ನ ಬಂದರುಗಳಿಗೆ ಹಾಕಿರುವ ದಿಗ್ಬಂಧನವನ್ನು ತೆರವು ಮಾಡಲಾಗುವುದು. ಇದಕ್ಕೆ ಪ್ರತಿಯಾಗಿ ಹೊರ್ಮುಜ್ ಜಲಸಂಧಿಗೆ ಇರಾನ್ ವಿಧಿಸಿರುವ ದಿಗ್ಬಂಧನವನ್ನು ತೆರವು ಮಾಡಬೇಕು ಎಂದು ಅಮೆರಿಕ ಹೇಳಿದೆ’ ಎಂದು ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಹರಾನ್, ನವದೆಹಲಿ:</strong> ‘ಯುದ್ಧ ಅಂತ್ಯಗೊಳಿಸಲು ಅಮೆರಿಕದೊಂದಿಗೆ ಮಾತುಕತೆ ಮುಂದುವರಿಯಬೇಕು ಎಂದಾದರೆ, ಕತಾರ್ನಲ್ಲಿ ಇರಿಸಲಾಗಿರುವ ಮುಟ್ಟುಗೋಲು ಹಾಕಿಕೊಂಡಿರುವ ನಮ್ಮ 12 ಬಿಲಿಯನ್ ಡಾಲರ್ (ಸುಮಾರು ₹1.14 ಲಕ್ಷ ಕೋಟಿ) ಅನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಇರಾನ್ ಹೇಳಿದೆ.</p>.<p>ಇರಾನ್ನ ತಸ್ನಿಮ್ ಸುದ್ದಿ ಸಂಸ್ಥೆ ಈ ಬಗ್ಗೆ ವರದಿ ಮಾಡಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಇರಾನ್ನ ಕೇಂದ್ರೀಯ ಬ್ಯಾಂಕ್ನ ಗವರ್ನರ್ ಸೇರಿದ ನಿಯೋಗವು ಸೋಮವಾರ ದೋಹಾ ತಲುಪಿದೆ.</p>.<p>‘ಮಾತುಕತೆ ಆರಂಭಿಸಲು ಇದು ಮೊದಲ ಹಂತವಾಗಲಿದೆ. ಹಣ ಬಿಡುಗಡೆಯಾಗುವುದು ಮಾತ್ರವಲ್ಲ, ಆ ಹಣವು ನಮಗೆ ತಲುಪಬೇಕು. ಹಣ ಬಿಡುಗಡೆ ಮಾತ್ರವೇ ಒಪ್ಪಂದಕ್ಕೆ ಬರಲು ನಾವು ಮುಂದಿಡುತ್ತಿರುವ ಷರತ್ತು ಅಲ್ಲ. ಇದೊಂದು ಭಾಗವಷ್ಟೆ ಎಂದು ಇರಾನ್ ಮೂಲಗಳು ಹೇಳಿವೆ’ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.</p>.<p>‘ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ನ ಹಣ ಬಿಡುಗಡೆ ಮತ್ತು ಇರಾನ್ನ ಬಂದರುಗಳಿಗೆ ಹಾಕಿರುವ ದಿಗ್ಬಂಧನವನ್ನು ತೆರವು ಮಾಡಲಾಗುವುದು. ಇದಕ್ಕೆ ಪ್ರತಿಯಾಗಿ ಹೊರ್ಮುಜ್ ಜಲಸಂಧಿಗೆ ಇರಾನ್ ವಿಧಿಸಿರುವ ದಿಗ್ಬಂಧನವನ್ನು ತೆರವು ಮಾಡಬೇಕು ಎಂದು ಅಮೆರಿಕ ಹೇಳಿದೆ’ ಎಂದು ‘ಫಾರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>