<p><strong>ದುಬೈ</strong>: ಹೊರ್ಮುಜ್ ಜಲಸಂಧಿಯ ಮೇಲ್ವಿಚಾರಣೆಗೆ ಒಮಾನ್ನೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಇರಾನ್ ಗುರುವಾರ ಹೇಳಿದೆ.</p>.ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ.<p>‘ಜಲಸಂಧಿಯ ಮೂಲಕ ಹಾದು ಹೋಗುವ ಹಡುಗಗಳ ಸುರಕ್ಷತೆ ಹಾಗೂ ಉತ್ತಮ ಸೇವೆ ನೀಡುವ ಉದ್ದೇಶದಿಂದ ಪ್ರಸ್ತಾವನೆ ರಚಿಸಲಾಗುತ್ತಿದೆ. ಎಂದು ಇರಾನ್ನ ರಾಯಭಾರಿ ಕಾಜೆಮ್ ಘರಿಬಬಾದಿ ಹೇಳಿದ್ದನ್ನು ಸರ್ಕಾರಿ ಸುದ್ದಿ ಸಂಸ್ಥೆ ಐಆರ್ಎನ್ಎ ವರದಿ ಮಾಡಿದೆ.</p><p>ಇಲ್ಲಿಂದ ಹಾದು ಹೋಗುವ ಹಡಗುಗಳ ಮೇಲೆ ದಾಳಿ ನಡೆಸುವುದು ಹಾಗೂ ಸುಮಾರು 2 ಮಿಲಿಯನ್ ಅಮೆರಿಕನ್ ಡಾಲರ್ ಸುಂಕ ವಿಧಿಸುವುದನ್ನು ಇರಾನ್ ಮಾಡುತ್ತಿದೆ.</p>.ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು.<p>ಆದರೆ ಒಮಾನ್ನೊಂದಿಗೆ ಯಾವ ರೀತಿಯ ಪ್ರಸ್ತಾವನೆ ರಚಿಸುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಮಾನ್ನಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೊರ್ಮುಜ್ ಜಲಸಂಧಿಯು ಇರಾನ್ ಹಾಗೂ ಒಮಾನ್ನ ಜಲ ಮಾರ್ಗದ ವ್ಯಾಪ್ತಿಯಲ್ಲಿ ಬರುವುದಿದ್ದರೂ, ಹಡಗುಗಳ ಸುಗಮ ಚಲನೆಗೆ ಅದನ್ನು ಅಂತರರಾಷ್ಟ್ರೀಯ ಜಲಮಾರ್ಗ ಎಂದು ಪರಿಗಣಿಸಲಾಗುತ್ತದೆ.</p><p>‘ಸಾಮಾನ್ಯವಾಗಿ ನಮ್ಮ ಮೇಲೆ ದಾಳಿ ನಡೆಸಿದಾಗ, ಜಲ ಸಂಚಾರಕ್ಕೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಇದು ದಾಳಿ ಮಾಡಿದ್ದರ ಫಲ’ ಎಂದು ಘರಿಬಬಾದಿ ಹೇಳಿದ್ದಾರೆ. ಸದ್ಯ ನಾವು ಸದ್ಯದ ಯುದ್ಧದಲ್ಲಿದ್ದು, ಯುದ್ಧ ಸಮಯದಲ್ಲಿ ಯುದ್ದ ಪೂರ್ವದ ನಿಯಮಗಳನ್ನು ಅನುಸರಿಸುವುದನ್ನು ಬಯಸಬೇಡಿ’ ಎಂದು ಅವರು ಹೇಳಿದ್ದಾರೆ.</p><p><em><strong>(ಎಎಫ್ಪಿ ಹಾಗೂ ಎಪಿ ವರದಿ)</strong></em></p>.ಕೊಲ್ಲಿ ಯುದ್ಧ: ಮಾರ್ಚ್ನಲ್ಲಿ ₹ 1.14 ಲಕ್ಷ ಕೋಟಿ ಹಿಂಪಡೆದ ವಿದೇಶಿ ಹೂಡಿಕೆದಾರರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ</strong>: ಹೊರ್ಮುಜ್ ಜಲಸಂಧಿಯ ಮೇಲ್ವಿಚಾರಣೆಗೆ ಒಮಾನ್ನೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಇರಾನ್ ಗುರುವಾರ ಹೇಳಿದೆ.</p>.ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ.<p>‘ಜಲಸಂಧಿಯ ಮೂಲಕ ಹಾದು ಹೋಗುವ ಹಡುಗಗಳ ಸುರಕ್ಷತೆ ಹಾಗೂ ಉತ್ತಮ ಸೇವೆ ನೀಡುವ ಉದ್ದೇಶದಿಂದ ಪ್ರಸ್ತಾವನೆ ರಚಿಸಲಾಗುತ್ತಿದೆ. ಎಂದು ಇರಾನ್ನ ರಾಯಭಾರಿ ಕಾಜೆಮ್ ಘರಿಬಬಾದಿ ಹೇಳಿದ್ದನ್ನು ಸರ್ಕಾರಿ ಸುದ್ದಿ ಸಂಸ್ಥೆ ಐಆರ್ಎನ್ಎ ವರದಿ ಮಾಡಿದೆ.</p><p>ಇಲ್ಲಿಂದ ಹಾದು ಹೋಗುವ ಹಡಗುಗಳ ಮೇಲೆ ದಾಳಿ ನಡೆಸುವುದು ಹಾಗೂ ಸುಮಾರು 2 ಮಿಲಿಯನ್ ಅಮೆರಿಕನ್ ಡಾಲರ್ ಸುಂಕ ವಿಧಿಸುವುದನ್ನು ಇರಾನ್ ಮಾಡುತ್ತಿದೆ.</p>.ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು.<p>ಆದರೆ ಒಮಾನ್ನೊಂದಿಗೆ ಯಾವ ರೀತಿಯ ಪ್ರಸ್ತಾವನೆ ರಚಿಸುತ್ತಿದೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಮಾನ್ನಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೊರ್ಮುಜ್ ಜಲಸಂಧಿಯು ಇರಾನ್ ಹಾಗೂ ಒಮಾನ್ನ ಜಲ ಮಾರ್ಗದ ವ್ಯಾಪ್ತಿಯಲ್ಲಿ ಬರುವುದಿದ್ದರೂ, ಹಡಗುಗಳ ಸುಗಮ ಚಲನೆಗೆ ಅದನ್ನು ಅಂತರರಾಷ್ಟ್ರೀಯ ಜಲಮಾರ್ಗ ಎಂದು ಪರಿಗಣಿಸಲಾಗುತ್ತದೆ.</p><p>‘ಸಾಮಾನ್ಯವಾಗಿ ನಮ್ಮ ಮೇಲೆ ದಾಳಿ ನಡೆಸಿದಾಗ, ಜಲ ಸಂಚಾರಕ್ಕೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಇದು ದಾಳಿ ಮಾಡಿದ್ದರ ಫಲ’ ಎಂದು ಘರಿಬಬಾದಿ ಹೇಳಿದ್ದಾರೆ. ಸದ್ಯ ನಾವು ಸದ್ಯದ ಯುದ್ಧದಲ್ಲಿದ್ದು, ಯುದ್ಧ ಸಮಯದಲ್ಲಿ ಯುದ್ದ ಪೂರ್ವದ ನಿಯಮಗಳನ್ನು ಅನುಸರಿಸುವುದನ್ನು ಬಯಸಬೇಡಿ’ ಎಂದು ಅವರು ಹೇಳಿದ್ದಾರೆ.</p><p><em><strong>(ಎಎಫ್ಪಿ ಹಾಗೂ ಎಪಿ ವರದಿ)</strong></em></p>.ಕೊಲ್ಲಿ ಯುದ್ಧ: ಮಾರ್ಚ್ನಲ್ಲಿ ₹ 1.14 ಲಕ್ಷ ಕೋಟಿ ಹಿಂಪಡೆದ ವಿದೇಶಿ ಹೂಡಿಕೆದಾರರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>