<p><strong>ಟೆಹರಾನ್:</strong> ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಿಸದೇ ಇದ್ದರೆ ಭೀಕರ ದಾಳಿ ನಡೆಸುವುದಾಗಿ ಅಮೆರಿಕ ಇರಾನ್ಗೆ ಎಚ್ಚರಿಕೆ ನೀಡಿದೆ. </p><p>ಈ ನಡುವೆ ಇರಾನ್ನ 1.4 ಕೋಟಿ ಜನರು ಪ್ರಾಣತ್ಯಾಗಕ್ಕಾಗಿ ಸಿದ್ಧ ಎಂದು ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹೇಳಿಕೆ ನೀಡಿದ್ದಾರೆ.</p><p>ಕೆಲವು ದಿನಗಳ ಹಿಂದೆ ರಾಜ್ಯ ವಾಹಿನಿಯ ಮೂಲಕ ಮತ್ತು ಲಿಖಿತ ಸಂದೇಶಗಳಲ್ಲಿ ಸ್ವಯಂ ಪ್ರೇರಿತವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಲಾಗಿತ್ತು. ಸರ್ಕಾರ ಕೂಡ ನಿವೃತ್ತ ಯೋಧರ ಬಳಿ ಅಮೆರಿಕದ ವಿರುದ್ಧ ಹೋರಾಡಲು ಕೈಜೋಡಿಸುವಂತೆ ಕೇಳಿಕೊಂಡಿತ್ತು.</p>.ನನ್ನನ್ನು ಸೇರಿದಂತೆ 1.4 ಕೋಟಿ ಜನರು ಪ್ರಾಣತ್ಯಾಗಕ್ಕೆ ಸಿದ್ದ: ಇರಾನ್ ಅಧ್ಯಕ್ಷ.ಇರಾನ್ ಸರ್ವೋಚ್ಚ ನಾಯಕನಿಗೆ ಯುದ್ಧದ ಅರಿವೇ ಇಲ್ಲ, ಜೀವಚ್ಛವವಾಗಿರುವ ಮೊಜ್ತಬಾ! .<p><strong>ಯುದ್ಧದಲ್ಲಿ ಭಾಗಿಯಾಗುತ್ತಿರುವ ಮಕ್ಕಳು</strong></p><p>ಇರಾನ್ನ ಅರೆಸೈನಿಕ ಕ್ರಾಂತಿಕಾರಿ ಪಡೆ 12 ವರ್ಷದ ಮಕ್ಕಳಿಗೂ ಯುದ್ಧದಲ್ಲಿ ಪಾಳ್ಗೊಳ್ಳಲು ಅವಕಾಶ ನೀಡುತ್ತಿದೆ ಎಂದು ವರದಿಯಾಗಿದೆ. ಈ ಕ್ರಮಕ್ಕೆ ಕಿಡಿಕಾರಿರುವ ಲಂಡನ್ ಮೂಲದ ಮಾನವ ಹಕ್ಕುಗಳ ಅಂತರರಾಷ್ಟ್ರೀಯ ಸಂಸ್ಥೆ ಆಮ್ನೆಸ್ಟಿ ಇಂಟರ್ನ್ಯಾಷನಲ್, ‘ಕೆಲವು ಮಕ್ಕಳು ಶಸ್ತ್ರಾಸ್ತ್ರಗಳನ್ನೂ ಹಿಡಿದುಕೊಂಡಿದ್ದಾರೆ. ಇದು ಯುದ್ಧಾಪರಾಧ’ ಎಂದು ಹೇಳಿದೆ.</p><p>ಅರೆಸೈನಿಕ ಪಡೆಯ ಸಾಂಸ್ಕೃತಿಕ ಅಧಿಕಾರಿ ರಹಿಮ್ ನಾಡೆಲಿ ಈ ಬಗ್ಗೆ ಮಾತನಾಡಿ, ‘ಮಕ್ಕಳನ್ನು ಗಸ್ತು ತಿರುಗುವುದು, ಚೆಕ್ಪಾಯಿಂಟ್ ಮತ್ತು ಲಾಜಿಸ್ಟಿಕ್ಗಳಲ್ಲಿ ಮಾತ್ರ ನೇಮಿಸಲಾಗುತ್ತಿದೆ. ಮಕ್ಕಳನ್ನು ಮಿಲಿಟರಿ ಕಾರ್ಯದಲ್ಲಿ ಬಳಸಿಕೊಳ್ಳುವುದಕ್ಕೆ ನಿಷೇಧವಿದೆ’ ಎಂದಿದ್ದಾರೆ.</p><p>'ಯುದ್ಧದಲ್ಲಿ ಭಾಗಿಯಾಗಲು ಮುಂದೆ ಬರುತ್ತಿರುವವರ ಸಂಖ್ಯೆ ಕಡಿಮೆಯಿದೆ. ಆದರೆ ಮಕ್ಕಳು ಯುದ್ಧದಲ್ಲಿ ಭಾಗವಹಿಸಲು ಕೇಳುತ್ತಿರುವುದರಿಂದ ವಯಸ್ಸಿನ ಮಿತಿಯನ್ನು12ಕ್ಕೆ ಇಳಿಸಲಾಗಿದೆ. ಮಕ್ಕಳು ಎಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೋ ಅಲ್ಲಿ ನಿಯೋಜಿಸಲಾಗುದು’ ಎಂದೂ ಅವರು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.</p><p>ಮಕ್ಕಳನ್ನು ಯುದ್ಧದಲ್ಲಿ ಮುಂಚೂಣಿ ಸೈನಿಕರಂತೆಯೇ ನೇಮಿಸಲಾಗುತ್ತಿದೆ ಎಂದು ಹಲವು ಮಾಧ್ಯಮಗಳ ವರದಿ ತಿಳಿಸಿವೆ. </p>.ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಮಾನವ ಸರಪಳಿ ನಿರ್ಮಿಸಲು ಇರಾನ್ ಕರೆ.<p><strong>ದಾಳಿ ತಡೆಗೆ ಮಾನವ ಸರಪಳಿ</strong></p><p>ಅಮೆರಿಕ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿರುವ ಹಿನ್ನೆಲೆ ಮಾನವ ಸರಪಳಿಯಂತೆ ನಿಲ್ಲುವಂತೆ ನಾಗರಿಕರಿಗೆ ಇರಾನ್ ಸರ್ಕಾರ ಕರೆ ನೀಡಿದೆ. </p><p>‘ನಾವೆಲ್ಲರೂ ಕೈಗೆ ಕೈ ಜೋಡಿಸಿ ನಿಲ್ಲೋಣ, ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧ ಎನ್ನುವುದನ್ನು ಸಾರೋಣ’ ಎಂದು ಇರಾನ್ನ ಯುವ ಮತ್ತು ಕ್ರೀಡಾ ಸಚಿವಾಲಯದ ಉಪ ಸಚಿವ ಅಲಿರೆಜಾ ರೆಹಿಮಿ ಹೇಳಿದ್ದಾರೆ.</p><p>ಈ ಮೂಲಕ ಅಮೆರಿಕದ ಎಂಥಹದ್ದೇ ದಾಳಿಗೂ ನಾವು ಹೆದರುವುದಿಲ್ಲ, ಇರಾನ್ನ ಜನ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬ ಸಂದೇಶವನ್ನು ಸಾರಲು ಮುಂದಾಗಿದೆ ಇರಾನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಹರಾನ್:</strong> ಹೊರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನು ಸಡಿಲಿಸದೇ ಇದ್ದರೆ ಭೀಕರ ದಾಳಿ ನಡೆಸುವುದಾಗಿ ಅಮೆರಿಕ ಇರಾನ್ಗೆ ಎಚ್ಚರಿಕೆ ನೀಡಿದೆ. </p><p>ಈ ನಡುವೆ ಇರಾನ್ನ 1.4 ಕೋಟಿ ಜನರು ಪ್ರಾಣತ್ಯಾಗಕ್ಕಾಗಿ ಸಿದ್ಧ ಎಂದು ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹೇಳಿಕೆ ನೀಡಿದ್ದಾರೆ.</p><p>ಕೆಲವು ದಿನಗಳ ಹಿಂದೆ ರಾಜ್ಯ ವಾಹಿನಿಯ ಮೂಲಕ ಮತ್ತು ಲಿಖಿತ ಸಂದೇಶಗಳಲ್ಲಿ ಸ್ವಯಂ ಪ್ರೇರಿತವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಲಾಗಿತ್ತು. ಸರ್ಕಾರ ಕೂಡ ನಿವೃತ್ತ ಯೋಧರ ಬಳಿ ಅಮೆರಿಕದ ವಿರುದ್ಧ ಹೋರಾಡಲು ಕೈಜೋಡಿಸುವಂತೆ ಕೇಳಿಕೊಂಡಿತ್ತು.</p>.ನನ್ನನ್ನು ಸೇರಿದಂತೆ 1.4 ಕೋಟಿ ಜನರು ಪ್ರಾಣತ್ಯಾಗಕ್ಕೆ ಸಿದ್ದ: ಇರಾನ್ ಅಧ್ಯಕ್ಷ.ಇರಾನ್ ಸರ್ವೋಚ್ಚ ನಾಯಕನಿಗೆ ಯುದ್ಧದ ಅರಿವೇ ಇಲ್ಲ, ಜೀವಚ್ಛವವಾಗಿರುವ ಮೊಜ್ತಬಾ! .<p><strong>ಯುದ್ಧದಲ್ಲಿ ಭಾಗಿಯಾಗುತ್ತಿರುವ ಮಕ್ಕಳು</strong></p><p>ಇರಾನ್ನ ಅರೆಸೈನಿಕ ಕ್ರಾಂತಿಕಾರಿ ಪಡೆ 12 ವರ್ಷದ ಮಕ್ಕಳಿಗೂ ಯುದ್ಧದಲ್ಲಿ ಪಾಳ್ಗೊಳ್ಳಲು ಅವಕಾಶ ನೀಡುತ್ತಿದೆ ಎಂದು ವರದಿಯಾಗಿದೆ. ಈ ಕ್ರಮಕ್ಕೆ ಕಿಡಿಕಾರಿರುವ ಲಂಡನ್ ಮೂಲದ ಮಾನವ ಹಕ್ಕುಗಳ ಅಂತರರಾಷ್ಟ್ರೀಯ ಸಂಸ್ಥೆ ಆಮ್ನೆಸ್ಟಿ ಇಂಟರ್ನ್ಯಾಷನಲ್, ‘ಕೆಲವು ಮಕ್ಕಳು ಶಸ್ತ್ರಾಸ್ತ್ರಗಳನ್ನೂ ಹಿಡಿದುಕೊಂಡಿದ್ದಾರೆ. ಇದು ಯುದ್ಧಾಪರಾಧ’ ಎಂದು ಹೇಳಿದೆ.</p><p>ಅರೆಸೈನಿಕ ಪಡೆಯ ಸಾಂಸ್ಕೃತಿಕ ಅಧಿಕಾರಿ ರಹಿಮ್ ನಾಡೆಲಿ ಈ ಬಗ್ಗೆ ಮಾತನಾಡಿ, ‘ಮಕ್ಕಳನ್ನು ಗಸ್ತು ತಿರುಗುವುದು, ಚೆಕ್ಪಾಯಿಂಟ್ ಮತ್ತು ಲಾಜಿಸ್ಟಿಕ್ಗಳಲ್ಲಿ ಮಾತ್ರ ನೇಮಿಸಲಾಗುತ್ತಿದೆ. ಮಕ್ಕಳನ್ನು ಮಿಲಿಟರಿ ಕಾರ್ಯದಲ್ಲಿ ಬಳಸಿಕೊಳ್ಳುವುದಕ್ಕೆ ನಿಷೇಧವಿದೆ’ ಎಂದಿದ್ದಾರೆ.</p><p>'ಯುದ್ಧದಲ್ಲಿ ಭಾಗಿಯಾಗಲು ಮುಂದೆ ಬರುತ್ತಿರುವವರ ಸಂಖ್ಯೆ ಕಡಿಮೆಯಿದೆ. ಆದರೆ ಮಕ್ಕಳು ಯುದ್ಧದಲ್ಲಿ ಭಾಗವಹಿಸಲು ಕೇಳುತ್ತಿರುವುದರಿಂದ ವಯಸ್ಸಿನ ಮಿತಿಯನ್ನು12ಕ್ಕೆ ಇಳಿಸಲಾಗಿದೆ. ಮಕ್ಕಳು ಎಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೋ ಅಲ್ಲಿ ನಿಯೋಜಿಸಲಾಗುದು’ ಎಂದೂ ಅವರು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.</p><p>ಮಕ್ಕಳನ್ನು ಯುದ್ಧದಲ್ಲಿ ಮುಂಚೂಣಿ ಸೈನಿಕರಂತೆಯೇ ನೇಮಿಸಲಾಗುತ್ತಿದೆ ಎಂದು ಹಲವು ಮಾಧ್ಯಮಗಳ ವರದಿ ತಿಳಿಸಿವೆ. </p>.ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಮಾನವ ಸರಪಳಿ ನಿರ್ಮಿಸಲು ಇರಾನ್ ಕರೆ.<p><strong>ದಾಳಿ ತಡೆಗೆ ಮಾನವ ಸರಪಳಿ</strong></p><p>ಅಮೆರಿಕ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿರುವ ಹಿನ್ನೆಲೆ ಮಾನವ ಸರಪಳಿಯಂತೆ ನಿಲ್ಲುವಂತೆ ನಾಗರಿಕರಿಗೆ ಇರಾನ್ ಸರ್ಕಾರ ಕರೆ ನೀಡಿದೆ. </p><p>‘ನಾವೆಲ್ಲರೂ ಕೈಗೆ ಕೈ ಜೋಡಿಸಿ ನಿಲ್ಲೋಣ, ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ನಡೆಸುವುದು ಯುದ್ಧಾಪರಾಧ ಎನ್ನುವುದನ್ನು ಸಾರೋಣ’ ಎಂದು ಇರಾನ್ನ ಯುವ ಮತ್ತು ಕ್ರೀಡಾ ಸಚಿವಾಲಯದ ಉಪ ಸಚಿವ ಅಲಿರೆಜಾ ರೆಹಿಮಿ ಹೇಳಿದ್ದಾರೆ.</p><p>ಈ ಮೂಲಕ ಅಮೆರಿಕದ ಎಂಥಹದ್ದೇ ದಾಳಿಗೂ ನಾವು ಹೆದರುವುದಿಲ್ಲ, ಇರಾನ್ನ ಜನ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದಾರೆ ಎಂಬ ಸಂದೇಶವನ್ನು ಸಾರಲು ಮುಂದಾಗಿದೆ ಇರಾನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>