<p><strong>ತೆಹ್ರಾನ್:</strong> ಇರಾನ್ನ ನೂತನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಗುರುವಾರ (ಏ.30) ಹೊಸ ಸಂದೇಶವೊಂದನ್ನು ಹೊರಡಿಸಿದ್ದಾರೆ. ‘ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ಯುದ್ಧ ಆರಂಭವಾದಾಗಿನಿಂದ ಗಲ್ಫ್ ಪ್ರದೇಶ ಹಾಗೂ ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ’ ಎಂದು ಹೇಳಿದ್ದಾರೆ.</p><p>‘ಅಪಾಯ ತಂದೊಡ್ಡುವ ವಿದೇಶಿಗರಿಗೆ ಗಲ್ಫ್ನಲ್ಲಿ ನೆಲೆಯಿಲ್ಲ, ಅಂತಹವರಿಗೆ ಸಮುದ್ರದ ಆಳವೇ ಗತಿ’ ಎಂದು ಎಚ್ಚರಿಸಿರುವ ಅವರು, ಗಲ್ಫ್ ಪ್ರದೇಶದ ರಕ್ಷಣೆಯನ್ನು ಇರಾನ್ ಖಚಿತಪಡಿಸಲಿದೆ ಮತ್ತು ಜಲಮಾರ್ಗದ ಮೇಲೆ ಶತ್ರುಗಳು ಎಸಗುತ್ತಿರುವ ದೌರ್ಜನ್ಯವನ್ನು ಕೊನೆಗೊಳಿಸಲಿದೆ ಎಂದು ಪ್ರತಿಪಾದಿಸಿದ್ದಾರೆ.</p><p>ಹೊರ್ಮುಜ್ ಜಲಸಂಧಿಯ ಹೊಸ ನಿರ್ವಹಣಾ ವ್ಯವಸ್ಥೆಯು ಎಲ್ಲಾ ಗಲ್ಫ್ ರಾಷ್ಟ್ರಗಳಿಗೆ ಶಾಂತಿ, ಪ್ರಗತಿ ಮತ್ತು ಆರ್ಥಿಕ ಪ್ರಯೋಜನಗಳನ್ನು ತರಲಿದೆ ಎಂದು ಇರಾನ್ನ ಪರಮೋಚ್ಚ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p><p>ಫೆ.28ರಂದು ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಅಲ್ಲದೆ ಇರಾನ್ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿದ್ದ ಅಮೆರಿಕ ಪಡೆ ನಡೆಸಿದ್ದ ದಾಳಿಗಳಲ್ಲಿ ಸರ್ವೊಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ, ಐಆರ್ಜಿಸಿ ಕಮಾಂಡರ್ಗಳು, ರಾಜಕಾರಣಿಗಳು ಹಾಗೂ ಸೈನ್ಯದ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖ ನಾಯಕರು ಹತ್ಯೆಯಾಗಿದ್ದರು.</p><p>ಆ ಬಳಿಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ವಾಬಾ ಖಮೇನಿ ಅವರನ್ನು ನೂತನ ಪರಮೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. 57 ವರ್ಷದ ಮೊಜ್ವಾಬಾ ಖಮೇನಿ ಅವರನ್ನು 88 ಸದಸ್ಯರ ತಜ್ಞರ ಮಂಡಳಿ ಆಯ್ಕೆ ಮಾಡಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಹ್ರಾನ್:</strong> ಇರಾನ್ನ ನೂತನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಗುರುವಾರ (ಏ.30) ಹೊಸ ಸಂದೇಶವೊಂದನ್ನು ಹೊರಡಿಸಿದ್ದಾರೆ. ‘ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ಯುದ್ಧ ಆರಂಭವಾದಾಗಿನಿಂದ ಗಲ್ಫ್ ಪ್ರದೇಶ ಹಾಗೂ ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ’ ಎಂದು ಹೇಳಿದ್ದಾರೆ.</p><p>‘ಅಪಾಯ ತಂದೊಡ್ಡುವ ವಿದೇಶಿಗರಿಗೆ ಗಲ್ಫ್ನಲ್ಲಿ ನೆಲೆಯಿಲ್ಲ, ಅಂತಹವರಿಗೆ ಸಮುದ್ರದ ಆಳವೇ ಗತಿ’ ಎಂದು ಎಚ್ಚರಿಸಿರುವ ಅವರು, ಗಲ್ಫ್ ಪ್ರದೇಶದ ರಕ್ಷಣೆಯನ್ನು ಇರಾನ್ ಖಚಿತಪಡಿಸಲಿದೆ ಮತ್ತು ಜಲಮಾರ್ಗದ ಮೇಲೆ ಶತ್ರುಗಳು ಎಸಗುತ್ತಿರುವ ದೌರ್ಜನ್ಯವನ್ನು ಕೊನೆಗೊಳಿಸಲಿದೆ ಎಂದು ಪ್ರತಿಪಾದಿಸಿದ್ದಾರೆ.</p><p>ಹೊರ್ಮುಜ್ ಜಲಸಂಧಿಯ ಹೊಸ ನಿರ್ವಹಣಾ ವ್ಯವಸ್ಥೆಯು ಎಲ್ಲಾ ಗಲ್ಫ್ ರಾಷ್ಟ್ರಗಳಿಗೆ ಶಾಂತಿ, ಪ್ರಗತಿ ಮತ್ತು ಆರ್ಥಿಕ ಪ್ರಯೋಜನಗಳನ್ನು ತರಲಿದೆ ಎಂದು ಇರಾನ್ನ ಪರಮೋಚ್ಚ ನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p><p>ಫೆ.28ರಂದು ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು. ಅಲ್ಲದೆ ಇರಾನ್ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿದ್ದ ಅಮೆರಿಕ ಪಡೆ ನಡೆಸಿದ್ದ ದಾಳಿಗಳಲ್ಲಿ ಸರ್ವೊಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ, ಐಆರ್ಜಿಸಿ ಕಮಾಂಡರ್ಗಳು, ರಾಜಕಾರಣಿಗಳು ಹಾಗೂ ಸೈನ್ಯದ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಪ್ರಮುಖ ನಾಯಕರು ಹತ್ಯೆಯಾಗಿದ್ದರು.</p><p>ಆ ಬಳಿಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ವಾಬಾ ಖಮೇನಿ ಅವರನ್ನು ನೂತನ ಪರಮೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. 57 ವರ್ಷದ ಮೊಜ್ವಾಬಾ ಖಮೇನಿ ಅವರನ್ನು 88 ಸದಸ್ಯರ ತಜ್ಞರ ಮಂಡಳಿ ಆಯ್ಕೆ ಮಾಡಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>