<p><strong>ಟೆಹರಾನ್</strong>: ಉದ್ವಿಗ್ನತೆ ತಗ್ಗಿಸುವ ಅಥವಾ ಯುದ್ಧವಿರಾಮದ ಪ್ರಸ್ತಾಪವನ್ನು ಇರಾನ್ನ ನೂತನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ತಿರಸ್ಕರಿಸಿದ್ದಾರೆ ಎಂದು ವರದಿ ತಿಳಿಸಿದೆ.</p><p>ಎರಡು ಮಧ್ಯವರ್ತಿ ದೇಶಗಳ ಮೂಲಕ ಅಮೆರಿಕವು ಇರಾನ್ಗೆ ಸಂದೇಶ ಕಳುಹಿಸಿತ್ತು. ಆದರೆ, ಖಮೇನಿ ಅದನ್ನು ತಿರಸ್ಕರಿಸಿದ್ದಾರೆ ಎಂದು ಇರಾನ್ನ ಇಬ್ಬರು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.</p><p>ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳುವ ಕುರಿತಂತೆ ಖಮೇನಿ ಕಟಿಬದ್ಧರಾಗಿದ್ದು, ತನ್ನ ನಿಲುವು ಕಠಿಣ ಮತ್ತು ಗಂಭೀರವಾಗಿದೆ ಎಂದು ಮೊದಲ ವಿದೇಶಿ ನೀತಿ ಅಧಿವೇಶನದಲ್ಲಿ ಅವರು ತಿಳಿಸಿರುವುದಾಗಿ ವರದಿ ತಿಳಿಸಿದೆ. ಈ ಅಧಿವೇಶನದಲ್ಲಿ ಅವರು ಖುದ್ದು ಭಾಗವಹಿಸಿದ್ದರೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.</p>.ಇರಾನ್ ವಿರುದ್ಧ ಇಸ್ರೇಲ್ ಪರಮಾಣು ಅಸ್ತ್ರ ಬಳಸುವುದಿಲ್ಲ: ಡೊನಾಲ್ಡ್ ಟ್ರಂಪ್. <p>ಅಮೆರಿಕ ಮತ್ತು ಇಸ್ರೇಲ್ ಮೊಣಕಾಲೂರಿ ತಮ್ಮ ಸೋಲು ಒಪ್ಪಿಕೊಳ್ಳುವವರೆಗೂ ಮತ್ತು ಮಾಡಿದ ನಷ್ಟಕ್ಕೆ ಪರಿಹಾರ ನೀಡುವವರೆಗೂ ಶಾಂತಿ ಸ್ಥಾಪನೆಯ ಮಾತೇ ಇಲ್ಲ. ಈಗ ಶಾಂತಿಗೆ ಸೂಕ್ತ ಸಮಯವಲ್ಲ ಎಂದು ಖಮೇನಿ ಹೇಳಿರುವುದಾಗಿ ತಿಳಿದುಬಂದಿದೆ.</p><p>ನೂತನ ಪರಮೋಚ್ಚ ನಾಯಕರಾಗಿ ಅಧಿಕಾರಕ್ಕೇರಿದ ಬಳಿಕ ಮಾತನಾಡಿದ್ದ ಮೊಜ್ತಬಾ ಖಮೇನಿ, ಇರಾನ್ ತನ್ನ ಹುತಾತ್ಮರ ರಕ್ತದ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಹೊರ್ಮುಜ್ ಜಲಸಂಧಿಯನ್ನು ಮುಚ್ಚುತ್ತದೆ. ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುತ್ತದೆ ಎಂದು ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದರು.</p> .ನಿಜಕ್ಕೂ ನೆತನ್ಯಾಹು ಬದುಕಿದ್ದಾರಾ..? ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಚರ್ಚೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಹರಾನ್</strong>: ಉದ್ವಿಗ್ನತೆ ತಗ್ಗಿಸುವ ಅಥವಾ ಯುದ್ಧವಿರಾಮದ ಪ್ರಸ್ತಾಪವನ್ನು ಇರಾನ್ನ ನೂತನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ತಿರಸ್ಕರಿಸಿದ್ದಾರೆ ಎಂದು ವರದಿ ತಿಳಿಸಿದೆ.</p><p>ಎರಡು ಮಧ್ಯವರ್ತಿ ದೇಶಗಳ ಮೂಲಕ ಅಮೆರಿಕವು ಇರಾನ್ಗೆ ಸಂದೇಶ ಕಳುಹಿಸಿತ್ತು. ಆದರೆ, ಖಮೇನಿ ಅದನ್ನು ತಿರಸ್ಕರಿಸಿದ್ದಾರೆ ಎಂದು ಇರಾನ್ನ ಇಬ್ಬರು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.</p><p>ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳುವ ಕುರಿತಂತೆ ಖಮೇನಿ ಕಟಿಬದ್ಧರಾಗಿದ್ದು, ತನ್ನ ನಿಲುವು ಕಠಿಣ ಮತ್ತು ಗಂಭೀರವಾಗಿದೆ ಎಂದು ಮೊದಲ ವಿದೇಶಿ ನೀತಿ ಅಧಿವೇಶನದಲ್ಲಿ ಅವರು ತಿಳಿಸಿರುವುದಾಗಿ ವರದಿ ತಿಳಿಸಿದೆ. ಈ ಅಧಿವೇಶನದಲ್ಲಿ ಅವರು ಖುದ್ದು ಭಾಗವಹಿಸಿದ್ದರೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.</p>.ಇರಾನ್ ವಿರುದ್ಧ ಇಸ್ರೇಲ್ ಪರಮಾಣು ಅಸ್ತ್ರ ಬಳಸುವುದಿಲ್ಲ: ಡೊನಾಲ್ಡ್ ಟ್ರಂಪ್. <p>ಅಮೆರಿಕ ಮತ್ತು ಇಸ್ರೇಲ್ ಮೊಣಕಾಲೂರಿ ತಮ್ಮ ಸೋಲು ಒಪ್ಪಿಕೊಳ್ಳುವವರೆಗೂ ಮತ್ತು ಮಾಡಿದ ನಷ್ಟಕ್ಕೆ ಪರಿಹಾರ ನೀಡುವವರೆಗೂ ಶಾಂತಿ ಸ್ಥಾಪನೆಯ ಮಾತೇ ಇಲ್ಲ. ಈಗ ಶಾಂತಿಗೆ ಸೂಕ್ತ ಸಮಯವಲ್ಲ ಎಂದು ಖಮೇನಿ ಹೇಳಿರುವುದಾಗಿ ತಿಳಿದುಬಂದಿದೆ.</p><p>ನೂತನ ಪರಮೋಚ್ಚ ನಾಯಕರಾಗಿ ಅಧಿಕಾರಕ್ಕೇರಿದ ಬಳಿಕ ಮಾತನಾಡಿದ್ದ ಮೊಜ್ತಬಾ ಖಮೇನಿ, ಇರಾನ್ ತನ್ನ ಹುತಾತ್ಮರ ರಕ್ತದ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಹೊರ್ಮುಜ್ ಜಲಸಂಧಿಯನ್ನು ಮುಚ್ಚುತ್ತದೆ. ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುತ್ತದೆ ಎಂದು ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದರು.</p> .ನಿಜಕ್ಕೂ ನೆತನ್ಯಾಹು ಬದುಕಿದ್ದಾರಾ..? ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಚರ್ಚೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>