ಭಾರತದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಜಿ.ಎಲ್.ಪೇರಿಸ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರ ನಡುವೆ ಸೋಮವಾರ ನಡೆದ ಮಾತುಕತೆಯಲ್ಲಿ ಮೀನುಗಾರರ ವಿಚಾರವೂ ಪ್ರಮುಖ ಚರ್ಚೆಯಾಗಿತ್ತು. ಮೀನುಗಾರರ ಸಮಸ್ಯೆಗಳ ವಿಚಾರ ವಿನಿಮಯ ನಡೆಸಿ, ದ್ವಿಪಕ್ಷೀಯ ಕಾರ್ಯಾವಿಧಾನಗಳನ್ನು ಮುಂಚಿತವಾಗಿ ತಿಳಿಸುವ ಬಗ್ಗೆ ಎರಡೂ ಕಡೆಯಿಂದಲೂ ಒಪ್ಪಿಕೊಳ್ಳಲಾಗಿದೆ ಎಂದು ಜೈಶಂಕರ್ ಹೇಳಿದ್ದರು.ಇದೇ ಸಂದರ್ಭದಲ್ಲೇಭಾರತೀಯ ಮೀನುಗಾರರ ಬಂಧನವಾಗಿದೆ.