<p><strong>ಲಂಡನ್:</strong> ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ತಲೆದೋರಿರುವ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜುಲೈ-ಆಗಸ್ಟ್ನಲ್ಲಿ ತೈಲ ಮಾರುಕಟ್ಟೆಯು 'ರೆಡ್ ಝೋನ್' (ಅಪಾಯ ವಲಯ) ತಲುಪಬಹುದು ಎಂದ ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯು (ಐಇಎ) ಎಚ್ಚರಿಸಿದೆ. </p><p>ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡಚಣೆ ಉಂಟಾಗಿದೆ. ಇದರಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆ ಸರಪಳಿಗೆ ತೊಂದರೆ ಎದುರಾಗಿದೆ. ಯುದ್ಧ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದ್ದರಿಂದ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿರುವ ಭೀತಿ ಇದೆ. </p><p>ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಮುಖ್ಯಸ್ಥ ಫಾತ್ಹೀ ಬಿರೋಲ್ ಪ್ರಕಾರ ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬರದಿದ್ದರೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಇಂಧನ ಬಿಕ್ಕಟ್ಟು ರೆಡ್ ಝೋನ್ಗೆ ತಲುಪಬಹುದು ಎಂದು ಎಚ್ಚರಿಸಿದ್ದಾರೆ. </p><p>ಬೇಸಿಗೆಯಲ್ಲಿ ಇಂಧನ ಬೇಡಿಕೆ ಹೆಚ್ಚಿರುವುದು ಹಾಗೂ ಕೊಲ್ಲಿ ರಾಷ್ಟ್ರಗಳಿಂದ ತೈಲ ರಫ್ತುಗಳ ಕೊರತೆ ಹಾಗೂ ಕಡಿಮೆಯಾಗುತ್ತಿರುವ ತೈಲ ದಾಸ್ತಾನುಗಳಿಂದಾಗಿ ತೀವ್ರ ಬಿಕ್ಕಟ್ಟು ತಲೆದೋರುತ್ತಿದೆ ಎಂದು ಅವರು ಹೇಳಿದ್ದಾರೆ. </p><p>ಈ ಇಂಧನ ಬಿಕ್ಕಟನ್ನು ಬಗೆಹರಿಸುವ ಏಕೈಕ ಪರಿಹಾರ ಮಾರ್ಗವೆಂದರೆ ಅದುವೇ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾರಿಗೆ ಮುಕ್ತಗೊಳಿಸುವುದು ಎಂದು ಅವರು ತಿಳಿಸಿದ್ದಾರೆ. </p>.ಭಾರತೀಯ ನೌಕಾಪಡೆ ಬೆಂಬಲದೊಂದಿಗೆ ಹೊರ್ಮುಜ್ ಜಲಸಂಧಿ ದಾಟಲಿರುವ LPG ಹೊತ್ತ ಹಡಗು.ಹೊರ್ಮುಜ್ ಮುಕ್ತ, ಯುದ್ಧ ಅಂತ್ಯಕ್ಕೆ ಇರಾನ್ನ 3 ಹಂತದ ಪ್ರಸ್ತಾವನೆಯಲ್ಲಿ ಏನಿದೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್:</strong> ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದಿಂದಾಗಿ ಜಾಗತಿಕವಾಗಿ ತಲೆದೋರಿರುವ ಇಂಧನ ಬಿಕ್ಕಟ್ಟು ತೀವ್ರಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜುಲೈ-ಆಗಸ್ಟ್ನಲ್ಲಿ ತೈಲ ಮಾರುಕಟ್ಟೆಯು 'ರೆಡ್ ಝೋನ್' (ಅಪಾಯ ವಲಯ) ತಲುಪಬಹುದು ಎಂದ ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯು (ಐಇಎ) ಎಚ್ಚರಿಸಿದೆ. </p><p>ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡಚಣೆ ಉಂಟಾಗಿದೆ. ಇದರಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆ ಸರಪಳಿಗೆ ತೊಂದರೆ ಎದುರಾಗಿದೆ. ಯುದ್ಧ ಸಂಬಂಧಿಸಿದಂತೆ ಅನಿಶ್ಚಿತತೆ ಮುಂದುವರಿದ್ದರಿಂದ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿರುವ ಭೀತಿ ಇದೆ. </p><p>ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಮುಖ್ಯಸ್ಥ ಫಾತ್ಹೀ ಬಿರೋಲ್ ಪ್ರಕಾರ ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬರದಿದ್ದರೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಇಂಧನ ಬಿಕ್ಕಟ್ಟು ರೆಡ್ ಝೋನ್ಗೆ ತಲುಪಬಹುದು ಎಂದು ಎಚ್ಚರಿಸಿದ್ದಾರೆ. </p><p>ಬೇಸಿಗೆಯಲ್ಲಿ ಇಂಧನ ಬೇಡಿಕೆ ಹೆಚ್ಚಿರುವುದು ಹಾಗೂ ಕೊಲ್ಲಿ ರಾಷ್ಟ್ರಗಳಿಂದ ತೈಲ ರಫ್ತುಗಳ ಕೊರತೆ ಹಾಗೂ ಕಡಿಮೆಯಾಗುತ್ತಿರುವ ತೈಲ ದಾಸ್ತಾನುಗಳಿಂದಾಗಿ ತೀವ್ರ ಬಿಕ್ಕಟ್ಟು ತಲೆದೋರುತ್ತಿದೆ ಎಂದು ಅವರು ಹೇಳಿದ್ದಾರೆ. </p><p>ಈ ಇಂಧನ ಬಿಕ್ಕಟನ್ನು ಬಗೆಹರಿಸುವ ಏಕೈಕ ಪರಿಹಾರ ಮಾರ್ಗವೆಂದರೆ ಅದುವೇ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾರಿಗೆ ಮುಕ್ತಗೊಳಿಸುವುದು ಎಂದು ಅವರು ತಿಳಿಸಿದ್ದಾರೆ. </p>.ಭಾರತೀಯ ನೌಕಾಪಡೆ ಬೆಂಬಲದೊಂದಿಗೆ ಹೊರ್ಮುಜ್ ಜಲಸಂಧಿ ದಾಟಲಿರುವ LPG ಹೊತ್ತ ಹಡಗು.ಹೊರ್ಮುಜ್ ಮುಕ್ತ, ಯುದ್ಧ ಅಂತ್ಯಕ್ಕೆ ಇರಾನ್ನ 3 ಹಂತದ ಪ್ರಸ್ತಾವನೆಯಲ್ಲಿ ಏನಿದೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>