ಬ್ಯಾಂಕಾಕ್ (ಎಪಿ): ಮ್ಯಾನ್ಮಾರ್ನ ಚುನಾವಣಾ ಅಧಿಕಾರಿಯೊಬ್ಬರನ್ನು ಗೆರಿಲ್ಲಾ ಗುಂಪೊಂದು ಶನಿವಾರ ಯಾಂಗನ್ನಲ್ಲಿ ಗುಂಡಿಟ್ಟು ಕೊಂದಿದೆ.
ಸೇನಾಡಳಿತ ನೇಮಕ ಮಾಡಿದ ಚುನಾವಣಾ ಆಯೋಗದ ಉಪನಿರ್ದೇಶಕ ಸಾಯ್ ಕ್ಯಾವ್ ಥೂ ಅವರು ಕಾರಿನಲ್ಲಿದ್ದಾಗ ಹಲವು ಬಾರಿ ಗುಂಡು ಹಾರಿಸಿ ಅವರನ್ನು ಕೊಲ್ಲಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
2021ರ ಫೆಬ್ರುವರಿ 1ರಂದು ಆಂಗ್ ಸನ್ ಸೂ ಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಬುಡಮೇಲುಗೊಳಿಸಿದ ಸೇನೆ ಆಡಳಿತವನ್ನು ತನ್ನ ವಶಕ್ಕೆ ಪಡೆದ ಬಳಿಕ ದೇಶದ ಅತ್ಯಂತ ಹಿರಿಯ ಅಧಿಕಾರಿಯನ್ನು ಹತ್ಯೆ ಮಾಡಿದ ಪ್ರಥಮ ಪ್ರಕರಣ ಇದಾಗಿದೆ.
ದೇಶದಲ್ಲಿ ಚುನಾವಣೆ ನಡೆಸುವ ಸನ್ನಿವೇಶ ಇಲ್ಲ ಎಂದು ಹೇಳಿದ್ದ ಸೇನಾಡಳಿತ, ಕಳೆದ ಫೆಬ್ರುವರಿಯಲ್ಲಿ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿತ್ತು.