<p>ಬೆಂಗಳೂರು: ಭಾರತ ಮೂಲದ ಇಬ್ಬರು ಸಿಖ್ ವ್ಯಕ್ತಿಗಳನ್ನು ಅಪರಿಚಿತರು ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಇಟಲಿಯಲ್ಲಿ ಶನಿವಾರ ನಡೆದಿದೆ.</p><p>ಇಟಲಿಯ ಬೆರ್ಗಾಮೊ ಪ್ರಾಂತ್ಯದ ಕೊವೊ ಎಂಬ ನಗರದ ಕೈಗಾರಿಕಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಪಂಜಾಬ್ ಮೂಲದ ರಾಗಿಂದರ್ (48) ಹಾಗೂ ಗುರುಮಿತ್ (48) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.</p><p>ಕೈಗಾರಿಕಾ ಪ್ರದೇಶದ ಗುರುದ್ವಾರದಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ ಹೊರಗೆ ಬರುವಾಗ ಕಾರಿನಲ್ಲಿ ಬಂದಿದ್ದ ಹಂತಕರು ಸಿಖ್ ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದಾರೆ. ಸಂತ್ರಸ್ತರು ಅದೇ ಕೈಗಾರಿಕಾ ಪ್ರದೇಶದಲ್ಲಿ ಆಟೊಮೊಬೈಲ್ ಸಂಬಂಧಿಸಿದ ಉಗ್ರಾಣ ಹೊಂದಿದ್ದರು.</p><p>ಪ್ರಾಥಮಿಕ ತನಿಖೆಯಲ್ಲಿ, ರಾಗಿಂದರ್ ಪರಿಚತರು ದಾಳಿ ಮಾಡಿರಬಹುದು. ದಾಳಿಗೆ ಕಾರಣ ತಿಳಿದು ಬಂದಿಲ್ಲ ಎಂದು ಕೊವೊ ಪೊಲೀಸರು ತಿಳಿಸಿದ್ದಾರೆ.</p><p>ಇನ್ನು, ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೊವೊ ಮೇಯರ್, ಸ್ಥಳೀಯ ಸಿಖ್ ಸಮುದಾಯದವರು ಶಾಂತಿ ಪ್ರಿಯರು. ಕಳೆದ 15 ವರ್ಷಗಳಲ್ಲಿ ಯಾವುದೇ ಇಂಥಹ ಘಟನೆ ನಡೆದಿರಲಿಲ್ಲ. ಉನ್ನತ ತನಿಖೆಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚಿಗೆ ಭಾರತೀಯರ ಮೇಲೆ ಹೊರದೇಶದಲ್ಲಿ ದಾಳಿಗಳು ಹೆಚ್ಚುತ್ತಿವೆ ಎನ್ನುವುದಕ್ಕೆ ಈ ಘಟನೆಯೂ ಸೇರ್ಪಡೆಯಾಗಿದೆ. ಈ ಕುರಿತು ಇಂಡಿಯಾ ನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಭಾರತ ಮೂಲದ ಇಬ್ಬರು ಸಿಖ್ ವ್ಯಕ್ತಿಗಳನ್ನು ಅಪರಿಚಿತರು ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಇಟಲಿಯಲ್ಲಿ ಶನಿವಾರ ನಡೆದಿದೆ.</p><p>ಇಟಲಿಯ ಬೆರ್ಗಾಮೊ ಪ್ರಾಂತ್ಯದ ಕೊವೊ ಎಂಬ ನಗರದ ಕೈಗಾರಿಕಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಪಂಜಾಬ್ ಮೂಲದ ರಾಗಿಂದರ್ (48) ಹಾಗೂ ಗುರುಮಿತ್ (48) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.</p><p>ಕೈಗಾರಿಕಾ ಪ್ರದೇಶದ ಗುರುದ್ವಾರದಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ ಹೊರಗೆ ಬರುವಾಗ ಕಾರಿನಲ್ಲಿ ಬಂದಿದ್ದ ಹಂತಕರು ಸಿಖ್ ವ್ಯಕ್ತಿಗಳ ಮೇಲೆ ದಾಳಿ ಮಾಡಿದ್ದಾರೆ. ಸಂತ್ರಸ್ತರು ಅದೇ ಕೈಗಾರಿಕಾ ಪ್ರದೇಶದಲ್ಲಿ ಆಟೊಮೊಬೈಲ್ ಸಂಬಂಧಿಸಿದ ಉಗ್ರಾಣ ಹೊಂದಿದ್ದರು.</p><p>ಪ್ರಾಥಮಿಕ ತನಿಖೆಯಲ್ಲಿ, ರಾಗಿಂದರ್ ಪರಿಚತರು ದಾಳಿ ಮಾಡಿರಬಹುದು. ದಾಳಿಗೆ ಕಾರಣ ತಿಳಿದು ಬಂದಿಲ್ಲ ಎಂದು ಕೊವೊ ಪೊಲೀಸರು ತಿಳಿಸಿದ್ದಾರೆ.</p><p>ಇನ್ನು, ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಕೊವೊ ಮೇಯರ್, ಸ್ಥಳೀಯ ಸಿಖ್ ಸಮುದಾಯದವರು ಶಾಂತಿ ಪ್ರಿಯರು. ಕಳೆದ 15 ವರ್ಷಗಳಲ್ಲಿ ಯಾವುದೇ ಇಂಥಹ ಘಟನೆ ನಡೆದಿರಲಿಲ್ಲ. ಉನ್ನತ ತನಿಖೆಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚಿಗೆ ಭಾರತೀಯರ ಮೇಲೆ ಹೊರದೇಶದಲ್ಲಿ ದಾಳಿಗಳು ಹೆಚ್ಚುತ್ತಿವೆ ಎನ್ನುವುದಕ್ಕೆ ಈ ಘಟನೆಯೂ ಸೇರ್ಪಡೆಯಾಗಿದೆ. ಈ ಕುರಿತು ಇಂಡಿಯಾ ನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>