<p><strong>ಲಂಡನ್ (ಪಿಟಿಐ):</strong> ಸರಕುಗಳು ಮತ್ತು ವಲಸಿಗರ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ದೋಷಿಗಳಾಗಿರುವ, ಭಾರತ ಮೂಲದ 9 ಮಂದಿಯ ತಂಡದ ಮೇಲೆ ಬ್ರಿಟನ್ ಅಧಿಕಾರಿಗಳು ಗಂಭೀರ ಸ್ವರೂಪದ ಅಪರಾಧಗಳ ಕೃತ್ಯ ತಡೆ ಆದೇಶಗಳನ್ನು (ಎಸ್ಸಿಪಿಒ) ಹೇರಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಭಾರತೀಯ ಮೂಲದ ತಂಡದವರನ್ನು ಸ್ವಂದೇರ್ ಧಲ್, ಜಸ್ಬೀರ್ ಕಪೂರ್, ದಿಲಿಯನ್, ಚರಣ್ ಸಿಂಗ್, ವಲ್ಜೀತ್ ಸಿಂಗ್, ಜಸ್ಬಿರ್ ಧಲ್ ಸಿಂಗ್, ಜಗಿಂದರ್ ಕಪೂರ್, ಜಕ್ದರ್ ಕಪೂರ್, ಅಮರ್ಜೀತ್ ಅಲಬಾದಿಸ್ ಎಂದು ಗುರುತಿಸಲಾಗಿದೆ. </p>.<p>ಬ್ರಿಟನ್ನಿಂದ ದುಬೈಗೆ ಸುಮಾರು ₹161 ಕೋಟಿ (15.5 ಮಿಲಿಯನ್ ಪೌಂಡ್) ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಹಾಗೂ 17 ವಲಸಿಗರ ಅಕ್ರಮ ಸಾಗಣೆ ಯತ್ನ ಪ್ರಕರಣದಲ್ಲಿ ಈ ಗುಂಪು ಶಾಮೀಲಾಗಿರುವುದು ಸಾಬೀತಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ದೋಷಿಯಾಗಿರುವ ಈ ಗುಂಪಿನ ಮೇಲೆ ಎಸ್ಸಿಪಿಒಗಳನ್ನು ಹೇರಲಾಗಿದೆ. ಈ ಅಪರಾಧಿಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅವರ ಮೇಲೆ ಎಸ್ಸಿಪಿಒ ಹೇರಲಾಗುವುದು. ಆ ಬಳಿಕ ಅವರ ಹಣಕಾಸು, ಆಸ್ತಿ, ಬ್ಯಾಂಕ್ ಖಾತೆಗಳು ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಟಿಕೆಟ್ಗಳ ಖರೀದಿ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್ (ಪಿಟಿಐ):</strong> ಸರಕುಗಳು ಮತ್ತು ವಲಸಿಗರ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ದೋಷಿಗಳಾಗಿರುವ, ಭಾರತ ಮೂಲದ 9 ಮಂದಿಯ ತಂಡದ ಮೇಲೆ ಬ್ರಿಟನ್ ಅಧಿಕಾರಿಗಳು ಗಂಭೀರ ಸ್ವರೂಪದ ಅಪರಾಧಗಳ ಕೃತ್ಯ ತಡೆ ಆದೇಶಗಳನ್ನು (ಎಸ್ಸಿಪಿಒ) ಹೇರಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಭಾರತೀಯ ಮೂಲದ ತಂಡದವರನ್ನು ಸ್ವಂದೇರ್ ಧಲ್, ಜಸ್ಬೀರ್ ಕಪೂರ್, ದಿಲಿಯನ್, ಚರಣ್ ಸಿಂಗ್, ವಲ್ಜೀತ್ ಸಿಂಗ್, ಜಸ್ಬಿರ್ ಧಲ್ ಸಿಂಗ್, ಜಗಿಂದರ್ ಕಪೂರ್, ಜಕ್ದರ್ ಕಪೂರ್, ಅಮರ್ಜೀತ್ ಅಲಬಾದಿಸ್ ಎಂದು ಗುರುತಿಸಲಾಗಿದೆ. </p>.<p>ಬ್ರಿಟನ್ನಿಂದ ದುಬೈಗೆ ಸುಮಾರು ₹161 ಕೋಟಿ (15.5 ಮಿಲಿಯನ್ ಪೌಂಡ್) ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಹಾಗೂ 17 ವಲಸಿಗರ ಅಕ್ರಮ ಸಾಗಣೆ ಯತ್ನ ಪ್ರಕರಣದಲ್ಲಿ ಈ ಗುಂಪು ಶಾಮೀಲಾಗಿರುವುದು ಸಾಬೀತಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ದೋಷಿಯಾಗಿರುವ ಈ ಗುಂಪಿನ ಮೇಲೆ ಎಸ್ಸಿಪಿಒಗಳನ್ನು ಹೇರಲಾಗಿದೆ. ಈ ಅಪರಾಧಿಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅವರ ಮೇಲೆ ಎಸ್ಸಿಪಿಒ ಹೇರಲಾಗುವುದು. ಆ ಬಳಿಕ ಅವರ ಹಣಕಾಸು, ಆಸ್ತಿ, ಬ್ಯಾಂಕ್ ಖಾತೆಗಳು ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಟಿಕೆಟ್ಗಳ ಖರೀದಿ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>