<p><strong>ಡೊಲೊ (ಸೊಮಾಲಿಯಾ):</strong> ಭೀಕರ ಬರಗಾಲದಿಂದ ತತ್ತರಿಸಿರುವ ದಕ್ಷಿಣ ಸೋಮಾಲಿಯಾದ ಪರಿಸ್ಥಿತಿ ಇರಾನ್ ಯುದ್ಧದಿಂದ ಮತ್ತಷ್ಟು ಹದಗೆಟ್ಟಿದೆ. ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದ್ದು, ಅಳಲು ಶಕ್ತಿಯಿಲ್ಲದಷ್ಟು ದುರ್ಬಲರಾಗಿದ್ದಾರೆ.</p><p>ಸತತ ನಾಲ್ಕು ವರ್ಷದಿಂದ ಮಳೆ ಬಾರದಿದ್ದರಿಂದ ಸೋಮಾಲಿಯಾದ ಬಹುತೇಕ ಭಾಗಗಳಿಗೆ ಬರಗಾಲ ಆವರಿಸಿದೆ. ಬೆಳೆ, ಜಾನುವಾರುಗಳನ್ನು ಕಳೆದುಕೊಂಡ ಜನರು ಎಲ್ಲವನ್ನು ತೊರೆದು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.</p><p>‘ಸೋಮಾಲಿಯಾದಿಂದ ಸುಮಾರು 3 ಸಾವಿರ ಕಿ.ಮೀ ದೂರದಲ್ಲಿ(ಪಶ್ಚಿಮ ಏಷ್ಯಾದಲ್ಲಿ) ಯುದ್ಧ ನಡೆಯುತ್ತಿದ್ದರೂ, ಅದು ಇಲ್ಲಿನ ಜನರನ್ನು ಇನ್ನಷ್ಟು ಕಷ್ಟಕ್ಕೆ ದೂಡಿದೆ’ ಎಂದು ಯುನಿಸೆಫ್(UNICEF) ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ.</p><p>‘ಯುದ್ಧದಿಂದ ಅಗತ್ಯ ಸಾಮಾಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇಂಧನ ದರಗಳು ಗಗನಕ್ಕೇರುತ್ತಿದೆ. ಇದರಿಂದ ಪರಿಹಾರ ಕಾರ್ಯಗಳಿಗೆ ತೊಡಕಾಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.</p><p>ಆದರೆ, ಇಲ್ಲಿನ ಜನರಿಗೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲ. ಅವರು ಜೀವವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.</p><p>‘ಡೊಲೊ ಪಟ್ಟಣದ ಲಾಡನ್ ನಿರಾಶ್ರಿತ ಶಿಬಿರದಲ್ಲಿ ಮಕ್ಕಳು ಅಳುತ್ತಿದ್ದರೆ ಅದು ತಾಯಂದಿರ ಪಾಲಿಗೆ ಸಂತಸದ ವಿಷಯವಾಗಿದೆ. ಅಪೌಷ್ಟಿಕತೆಯಿಂದ ಮಕ್ಕಳಿಗೆ ಅಳಲು ಶಕ್ತಿ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೊಲೊ (ಸೊಮಾಲಿಯಾ):</strong> ಭೀಕರ ಬರಗಾಲದಿಂದ ತತ್ತರಿಸಿರುವ ದಕ್ಷಿಣ ಸೋಮಾಲಿಯಾದ ಪರಿಸ್ಥಿತಿ ಇರಾನ್ ಯುದ್ಧದಿಂದ ಮತ್ತಷ್ಟು ಹದಗೆಟ್ಟಿದೆ. ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದ್ದು, ಅಳಲು ಶಕ್ತಿಯಿಲ್ಲದಷ್ಟು ದುರ್ಬಲರಾಗಿದ್ದಾರೆ.</p><p>ಸತತ ನಾಲ್ಕು ವರ್ಷದಿಂದ ಮಳೆ ಬಾರದಿದ್ದರಿಂದ ಸೋಮಾಲಿಯಾದ ಬಹುತೇಕ ಭಾಗಗಳಿಗೆ ಬರಗಾಲ ಆವರಿಸಿದೆ. ಬೆಳೆ, ಜಾನುವಾರುಗಳನ್ನು ಕಳೆದುಕೊಂಡ ಜನರು ಎಲ್ಲವನ್ನು ತೊರೆದು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.</p><p>‘ಸೋಮಾಲಿಯಾದಿಂದ ಸುಮಾರು 3 ಸಾವಿರ ಕಿ.ಮೀ ದೂರದಲ್ಲಿ(ಪಶ್ಚಿಮ ಏಷ್ಯಾದಲ್ಲಿ) ಯುದ್ಧ ನಡೆಯುತ್ತಿದ್ದರೂ, ಅದು ಇಲ್ಲಿನ ಜನರನ್ನು ಇನ್ನಷ್ಟು ಕಷ್ಟಕ್ಕೆ ದೂಡಿದೆ’ ಎಂದು ಯುನಿಸೆಫ್(UNICEF) ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ.</p><p>‘ಯುದ್ಧದಿಂದ ಅಗತ್ಯ ಸಾಮಾಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇಂಧನ ದರಗಳು ಗಗನಕ್ಕೇರುತ್ತಿದೆ. ಇದರಿಂದ ಪರಿಹಾರ ಕಾರ್ಯಗಳಿಗೆ ತೊಡಕಾಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.</p><p>ಆದರೆ, ಇಲ್ಲಿನ ಜನರಿಗೆ ಇದ್ಯಾವುದರ ಬಗ್ಗೆಯೂ ಅರಿವಿಲ್ಲ. ಅವರು ಜೀವವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.</p><p>‘ಡೊಲೊ ಪಟ್ಟಣದ ಲಾಡನ್ ನಿರಾಶ್ರಿತ ಶಿಬಿರದಲ್ಲಿ ಮಕ್ಕಳು ಅಳುತ್ತಿದ್ದರೆ ಅದು ತಾಯಂದಿರ ಪಾಲಿಗೆ ಸಂತಸದ ವಿಷಯವಾಗಿದೆ. ಅಪೌಷ್ಟಿಕತೆಯಿಂದ ಮಕ್ಕಳಿಗೆ ಅಳಲು ಶಕ್ತಿ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>