ಬೆಂಗಳೂರು, ಜ. 29– ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಂತಹ ನಾಯಕರೊಬ್ಬರಿಗೆ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಕಾನ್ಶೀರಾಂ ಶೋಧ ಆರಂಭಿಸಿದ್ದಾರೆ.
ಇಂದು ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ‘ಆಂಧ್ರ ಪ್ರದೇಶದಲ್ಲಿ ಸರ್ಕಾರ ರಚಿಸಲು ನಮ್ಮ ಪಕ್ಷಕ್ಕೆ ಮುಲಾಯಂ ಅಂಥವರು ಬೇಕಿಲ್ಲ. ಆದರೆ ಕರ್ನಾಟಕದಲ್ಲಿ ಇಂಥವರೊಬ್ಬರ ಅಗತ್ಯವಿದೆ. ಅವರಿಗಾಗಿ ಇಲ್ಲಿ ಹುಡುಕಾಟ ಆರಂಭಿಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಶ್ಮೀರ: ಬಾಹ್ಯ ಒತ್ತಡಕ್ಕೆ ಅವಕಾಶ ನೀಡೆವು– ಚವಾಣ್
ಜಮ್ಮು, ಜ. 29 (ಯುಎನ್ಐ)– ಜಮ್ಮು– ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಪಾಕಿಸ್ತಾನ ನಡೆಸಿರುವ ಸಂಚಿಗೆ ಯಾವುದೇ ಹೊರಗಿನ ದೇಶ ಬೆಂಬಲ ನೀಡಲು ನಾವು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಎಸ್.ಬಿ. ಚವಾಣ್ ಘೋಷಿಸಿದರು.