ಬೆಳಗಾವಿ, ಫೆ. 21– ಉಭಯ ರಾಜ್ಯಗಳ ಗಡಿ ಪ್ರದೇಶಗಳ ಅಭಿವೃದ್ಧಿಗೆ ಧಕ್ಕೆ ಮಾಡಿ ಗಡಿ ವಿವಾದವನ್ನು ಬಗೆಹರಿಸುವುದರಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ಆಸಕ್ತಿಯಿಲ್ಲ ಎಂದು ಇಂದು ಸಂಜೆ ಇಲ್ಲಿಗೆ ಹತ್ತಿರದ ಬೆಳಗುಂದಿಯಲ್ಲಿ ಹೇಳುವ ಮೂಲಕ, ಮೂರು ದಶಕಗಳಿಂದ ದೀರ್ಘವಾದ ಈ ವಿವಾದಕ್ಕೆ ಮಹಾರಾಷ್ಟ್ರ ಶಿಕ್ಷಣ ರಾಜ್ಯ ಸಚಿವ ಸದಾಶಿವರಾವ ಮಾಂಡಲೀಕ ಅವರು ಹೊಸ ತಿರುವು ನೀಡಿದರು.