ಚೌಡರೆಡ್ಡಿಗೆ ಗೃಹ, ರೈ–ಅಬ್ಕಾರಿ, ಖರ್ಗೆ–ಕೈಗಾರಿಕೆ, ರೇವಣ್ಣಗೆ ಕೃಷಿ
ಬೆಂಗಳೂರು, ಏ. 14– ಹದಿನಾಲ್ಕು ಮಂದಿ ಹೊಸಬರ ಸೇರ್ಪಡೆ ಮತ್ತು ಇಬ್ಬರಿಗೆ ಬಡ್ತಿ ನೀಡಿ ಇಂದು ಇಲ್ಲಿ ಸಂಪುಟ ಪುನರ್ರಚಿಸಿದ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ತಮ್ಮ ಹೊರೆ ಇಳಿಸಿಕೊಳ್ಳುವುದರ ಜತೆಗೆ ಖಾತೆಗಳ ಹಂಚಿಕೆಯಲ್ಲಿ ಭಾರಿ ಬದಲಾವಣೆ ಮಾಡಿದ್ದಾರೆ.