ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ 04 ಆಗಸ್ಟ್‌, 1994

Last Updated 3 ಆಗಸ್ಟ್ 2019, 19:31 IST
ಅಕ್ಷರ ಗಾತ್ರ

ಕ್ರಿಯಾ ವರದಿ: ಪ್ರಗತಿ ಕಾಣದ ಸರ್ಕಾರ– ಪ್ರತಿಪಕ್ಷ ಮಾತುಕತೆ
ನವದೆಹಲಿ, ಆ. 3 (ಯುಎನ್‌ಐ, ಪಿಟಿಐ)– ಷೇರು ಹಗರಣ ಕುರಿತು ಕ್ರಮ ಕೈಗೊಂಡ ವರದಿಯ ಮೇಲೆ ಸಂಸತ್ತಿನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಲೋಕಸಭೆಯ ಸ್ವೀಕರ್‌ ಶಿವರಾಜ ಪಾಟೀಲ್‌ ಅವರು ವಿವಿಧ ಪಕ್ಷಗಳ ನಾಯಕರೊಂದಿಗೆ ಇಂದು ನಡೆಸಿದ ಎರಡು ಸುತ್ತಿನ ಮಾತುಕತೆ ವಿಫಲವಾಯಿತು.

ಮಧ್ಯಾಹ್ನ ಸ್ಪೀಕರ್‌ ಅವರು ನಡೆಸಿದ ಎರಡು ಗಂಟೆ ಕಾಲ ಜರುಗಿದ ಸಭೆ ಹಾಗೂ ರಾತ್ರಿ ಅವರು ನಡೆಸಿದ ಭೋಜನಕೂಟದ ಸಭೆ ಈ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾದವು.

ರಾಜೀನಾಮೆ ಇಲ್ಲ: ಮನಮೋಹನ್‌ ಸ್ಪಷ್ಟನೆ
ನವದೆಹಲಿ, ಆ.3 (ಪಿಟಿಐ)– ಕೇಂದ್ರ ಸಂಪುಟಕ್ಕೆ ತಾವು ರಾಜೀನಾಮೆ ನೀಡಿರುವುದಾಗಿ ಕೇಳಿಬಂದ ವದಂತಿಗಳನ್ನು ಹಣಕಾಸು ಸಚಿವ ಡಾ. ಮನಮೋಹನ್‌ ಸಿಂಗ್‌ ಇಂದು ಇಲ್ಲಿ ನಿರಾಕರಿಸಿದರು.

‘ಅದು ಬರೀ ವದಂತಿ. ನಾನಂತೂ ರಾಜೀನಾಮೆ ಸಲ್ಲಿಸಿಲ್ಲ’ ಎಂದು ನಿರಾಳವಾಗಿದ್ದ ಸಿಂಗ್‌ ಸಂಸತ್‌ ಭವನದ ತಮ್ಮ ಕೊಠಡಿಯಲ್ಲಿ ಪಿಟಿಐ ಜತೆ ಮಾತನಾಡುತ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT