ಕ್ರಿಯಾ ವರದಿ: ಪ್ರಗತಿ ಕಾಣದ ಸರ್ಕಾರ– ಪ್ರತಿಪಕ್ಷ ಮಾತುಕತೆ
ನವದೆಹಲಿ, ಆ. 3 (ಯುಎನ್ಐ, ಪಿಟಿಐ)– ಷೇರು ಹಗರಣ ಕುರಿತು ಕ್ರಮ ಕೈಗೊಂಡ ವರದಿಯ ಮೇಲೆ ಸಂಸತ್ತಿನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಲೋಕಸಭೆಯ ಸ್ವೀಕರ್ ಶಿವರಾಜ ಪಾಟೀಲ್ ಅವರು ವಿವಿಧ ಪಕ್ಷಗಳ ನಾಯಕರೊಂದಿಗೆ ಇಂದು ನಡೆಸಿದ ಎರಡು ಸುತ್ತಿನ ಮಾತುಕತೆ ವಿಫಲವಾಯಿತು.