ಶ್ರವಣಬೆಳಗೊಳ, ಡಿ.18– ಸರ್ವಸಂಗ ಪರಿತ್ಯಾಗಿಯಾದ ಬಾಹುಬಲಿಯ ಭವ್ಯ ಪ್ರತಿಮೆಯ ಮೇಲೆ ಮುಗಿಲಿನಿಂದ ನವರತ್ನ ಖಚಿತ ಬೆಳ್ಳಿಬಂಗಾರದ ಹೂ ಮಳೆಗರೆದು ನಾಳೆ ಮೊದಲಾಗುವ ಮಹಾಮಜ್ಜನಕ್ಕೆ ಮುನ್ನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ರಾಷ್ಟ್ರದ ಪರವಾಗಿ ಪುಷ್ಪಾರ್ಚನೆ ಸಲ್ಲಿಸಿದರು.
ರಾಜ್ಯ ನಾಯಕತ್ವ ಬದಲಾವಣೆ ಇಲ್ಲ– ಪ್ರಧಾನಿ ರಾವ್ ಇಂಗಿತ
ಬೆಂಗಳೂರು, ಡಿ.18– ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬುದರ ಬಗ್ಗೆ ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಇಂಗಿತ ವ್ಯಕ್ತಪಡಿಸಿದರು.
ಪ್ರಧಾನಿಗಳು ನೇರವಾಗಿ ನಾಯಕತ್ವ ಬದಲಾವಣೆ ಅಥವಾ ಮುಂದುವರಿಕೆ ವಿಷಯವನ್ನು ಪ್ರಸ್ತಾಪಿಸದಿದ್ದರೂ ಅವರು ಮೈಸೂರಿನಲ್ಲಿ ಮಾತನಾಡಿದ ರೀತಿ ಈ ಸುಳಿವು ನೀಡಿದಂತಿತ್ತು.
ಬಂಗಾರಪ್ಪ ವಿರುದ್ಧ ಇಂದು ಕ್ರಮ?
ಬೆಂಗಳೂರು, ಡಿ.18– ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬುದು ಇಂದು ರಾತ್ರಿ ಅಥವಾ ನಾಳೆಯ ಒಳಗಾಗಿ ಗೊತ್ತಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷರೂ ಆದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ಇಲ್ಲಿ ತಿಳಿಸಿದರು.