ಕಾನ್ಪುರ, ಫೆ. 10 (ಯುಎನ್ಐ, ಪಿಟಿಐ)– ಕಾನ್ಪುರದ ಬಾಬುಪುರ್ವಾ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಬಿಜೆಪಿ ಮಾಜಿ ಕಾರ್ಪೊರೇಟರ್ ಕಾಲಾ ಬಚ್ಚಾ ಅವರ ಹತ್ಯೆಯಿಂದ ಭುಗಿಲೆದ್ದ ಹಿಂಸಾಚಾರ ಮತ್ತು ಗಲಭೆ ಇಂದು ಜಿಲ್ಲೆಯ ಇತರ ಪ್ರದೇಶಗಳಿಗೂ ವ್ಯಾಪಿಸಿತು. ಗಲಭೆಯಲ್ಲಿ ಮೂವರು ಸತ್ತಿದ್ದಾರೆ. ಆದರೆ ಸತ್ತವರ ಸಂಖ್ಯೆ ಐದು ಎಂದು ಅನಧಿಕೃತ ವರದಿಗಳು ತಿಳಿಸಿವೆ.