ನವದೆಹಲಿ, ಫೆ. 16– ಬಹುದಿನಗಳಿಂದ ನಿರೀಕ್ಷಿಸಿದ್ದ ಕೇಂದ್ರ ಸಂಪುಟದ ವಿಸ್ತರಣೆ ನಾಳೆ ಆಗುವ ಸಾಧ್ಯತೆ ಇರುವುದಾಗಿ ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗೆ ಕಾಂಗೈ ಸೇರಿದ ಅಜಿತ್ ಸಿಂಗ್ ಮತ್ತು ಅವರ ಬೆಂಬಲಿಗ ರಾಮ ಲಖನ್ ಸಿಂಗ್ ಯಾದವ್, ಜಗನ್ನಾಥ್ ಮಿಶ್ರ ಮತ್ತು ಜಿತೇಂದ್ರ ಪ್ರಸಾದ್, ಎ.ಆರ್. ಆಂಟುಲೆ ಅವರು ಸಂಪುಟಕ್ಕೆ ಸೇರುವುದು ಬಹುತೇಕ ಖಚಿತವಾಗಿರುವುದಾಗಿ ಗೊತ್ತಾಗಿದೆ.
ನಾಳೆ ಮಧ್ಯಾಹ್ನ 3 ಗಂಟೆಗೆ ಸಂಪುಟಕ್ಕೆ ಸೇರುವ ಹೊಸಬರ ಪ್ರಮಾಣವಚನ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವುದಾಗಿ ತಿಳಿದು ಬಂದಿದೆ.
ಬಿ.ಇ., ವೈದ್ಯ, ವಿ.ವಿ. ಮಟ್ಟದಲ್ಲಿ ಪ್ರವೇಶ ಪರೀಕ್ಷೆ
ಬೆಂಗಳೂರು, ಫೆ. 16– ಮುಂದಿನ ವರ್ಷದಿಂದ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸಿ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಕಾಲೇಜುಗಳಿಗೆ ಪ್ರವೇಶ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಜಿ. ರಾಮಕೃಷ್ಣ ಇಂದು ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದರು.