ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 23–8–1994

Last Updated 22 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ದಲಿತರಿಗೆ ದನಿ ಕೊಟ್ಟ ಅರಸು ಪ್ರತಿಮೆ ಸಿದ್ಧ

ಬೆಂಗಳೂರು, ಆ. 22– ಊರು, ದೇವಸ್ಥಾನ, ಹೋಟೆಲ್, ಬಾವಿ ಮತ್ತು ನಲ್ಲಿಗಳಿಗೆ ಪ್ರವೇಶವಿಲ್ಲದೆ ಸಾರ್ವಜನಿಕ ಬದುಕಿನಿಂದ ದೂರ ಉಳಿದ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ದನಿ ಕೊಟ್ಟ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ ಪ್ರತಿಮೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.

ಕೈ ಮೇಲೆತ್ತಿರುವ ಎಂಟೂವರೆ ಅಡಿ ಎತ್ತರದ ಪ್ರತಿಮೆಯನ್ನು 1,100 ಕೆ.ಜಿ ಕಂಚಿನ ಲೋಹದಿಂದ 9 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. ನಾಡಿನ ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರು ಏಳು ತಿಂಗಳಲ್ಲಿ ಕಂಚಿಗೆ ಜೀವ ತುಂಬಿದ್ದಾರೆ. ಶಿಲ್ಪಿಗಳಾದ ಕನಕಾ ಮೂರ್ತಿ, ನಾಗಪುರದ ಸುಧಾಕರ ಬೇಲೇಕರ್ ಅವರು ವೆಂಕಟಾಚಲಪತಿ ಅವರ ಜತೆ ಕೈಜೋಡಿಸಿದ್ದಾರೆ.

‌‘ಆತ್ಮಕಥೆ’ ಒಲ್ಲದ ಆರ್‌ವಿ

ಮದ್ರಾಸ್, ಆ. 22 (ಯುಎನ್‌ಐ)– ‘ರಾಷ್ಟ್ರಪತಿಯಾಗಿ ನನ್ನ ದಿನಗಳು’ ಪುಸ್ತಕ ಬರೆದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಗುರಿಯಾದ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ತಮ್ಮ ಆತ್ಮಕಥೆ ಬರೆಯುವ ಆಲೋಚನೆ ಹೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT