ಚಿತ್ರದುರ್ಗ, ಆ. 8– ಇಲ್ಲಿನ ಬೃಹನ್ಮಠದ ಹಿರಿಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳ ಅಂತಿಮ ಸಂಸ್ಕಾರವನ್ನು ಹೊಳಲ್ಕೆರೆ ಸಮೀಪದ ಒಂಟಿ ಕಂಬದ ಮಠದಲ್ಲಿ ಇಂದು ಸಂಜೆ ಸರ್ಕಾರದ ಸಕಲ ಮರ್ಯಾದೆಗಳೊಂದಿಗೆ ನೆರವೇರಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಸ್ವಾಮೀಜಿಯವರ ಅಂತಿಮ ದರ್ಶನ ಪಡೆದರು.