ಬೆಂಗಳೂರು, ಸೆ. 18– ವಿರೋಧ ಪಕ್ಷಗಳ ಅಸಹಕಾರ, ಖಂಡನೆ, ಕಟು ಟೀಕೆ, ಬಹಿಷ್ಕಾರ ಬೆದರಿಕೆಗಳ ನಡುವೆ ವಿಧಾನ ಮಂಡಲದ ಎರಡು ದಿನಗಳ ವಿಶೇಷ ಅಧಿವೇಶನ ನಾಳೆ ಆರಂಭವಾಗಲಿದ್ದು, ಈಗಾಗಲೇ ಮಂಡಿಸಿರುವ ಶೇ 80ರ ಪ್ರಮಾಣದ ಉದ್ದೇಶಿತ ಮೀಸಲಾತಿ ಮಸೂದೆಗೆ ಅಂಗೀಕಾರ ಪಡೆಯುವುದು ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರಕ್ಕೆ ಪ್ರತಿಷ್ಠೆ ಪ್ರಶ್ನೆಯಾಗಿದೆ.