ಪ್ರಧಾನಿ ವಿರುದ್ಧ ಅರ್ಜುನ್ ಮತ್ತೆ ಪ್ರಹಾರ
ಬಂಡಾ, ಜ. 22 (ಪಿಟಿಐ)– ಕಾಂಗ್ರೆಸ್ (ಐ) ನಾಯಕತ್ವದ ವಿರುದ್ಧ ಸಿಡಿದೆದ್ದ ಅರ್ಜುನ್ ಸಿಂಗ್ ಅವರು ಇಂದು ಮತ್ತೆ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ. ಇದೇ ವೇಳೆ ಕಾಂಗೈ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ಪೈಲಟ್ ಅವರು ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವ ಆಶಾವಾದ ವ್ಯಕ್ತಪಡಿಸಿದರು.