ಕಾಲಮಿತಿಯೊಳಗೆ ಕೃಷ್ಣಾ ಯೋಜನೆ
ವಿಜಾಪುರ, ಜ. 23– ‘ಆಲಮಟ್ಟಿಗೆ ನನ್ನ ಪ್ರಥಮ ಪ್ರಗತಿ ಪರಿಶೀಲನಾ ಭೇಟಿ ಇದು. ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತಂತೆ ವಸ್ತುಸ್ಥಿತಿ ಪರಿಶೀಲಿಸಿ, ಪ್ರಸಕ್ತ ಅಭಿವೃದ್ಧಿ ವಿದ್ಯಮಾನಗಳನ್ನು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಬಚಾವತ್ ತೀರ್ಪಿನಂತೆ 2000ನೇ ಇಸವಿಯ ಕಾಲಮಿತಿಯಲ್ಲೇ ಈ ಯೋಜನೆ ಪೂರ್ಣಗೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದು ಮುಖ್ಯಮಂತ್ರಿ ದೇವೇಗೌಡರು ಭರವಸೆ ನೀಡಿದರು.