ಮುಕ್ತ ಚುನಾವಣೆ ಶಂಕಾಸ್ಪದ ಬಿಹಾರದಲ್ಲಿ ಅರಾಜಕರತೆ: ಪ್ರಧಾನಿ ಕಟು ಟೀಕೆ
ಪಟ್ನಾ, ಮಾರ್ಚಿ 7(ಯುಎನ್ಐ, ಪಿಟಿಐ) – ಬಿಹಾರದಲ್ಲಿ ಎಲ್ಲ ರಂಗಗಳಲ್ಲಿಯೂ ಸರ್ಕಾರ ವಿಫಲವಾಗಿದ್ದು ಅರಾಜಕತೆ ನೆರೆಯೂರಿದೆ. ಇದರಿಂದಾಗಿ ಮತದಾರರು ನಿರ್ಭಯವಾಗಿ ಮತ ಚಲಾಯಿಸುವುದೇ ಶಂಕಾಸ್ಪವಾಗಿದೆ ಎಂದು ಪ್ರಧಾನಿ ಪಿ. ವಿ. ನರಸಿಂಹ ರಾವ್ ಅವರು ಇಂದು ತೀವ್ರವಾಗಿ ಆರೋಪಿಸಿದರು.