ಕಲ್ಬುರ್ಗಿ, ಜೂನ್ 23– ಎಸ್.ಆರ್. ಬೊಮ್ಮಾಯಿಯವರನ್ನು ಜನತಾದಳದ ಅಧ್ಯಕ್ಷತೆಯಿಂದ ಕೆಳಗಿಳಿಸಬೇಕು ಎಂಬ ಮೊಂಡು ಹಟ ಹಿಡಿದ ಕೆಲವು ಹಿತಾಸಕ್ತಿಗಳಿಂದಲೇ ಜನತಾದಳವು ಕೇಂದ್ರದಲ್ಲಿ ಮತ್ತೆ ಇಬ್ಭಾಗಗೊಳ್ಳುವಂತಾಯಿತೆಂದು, ದಳವನ್ನು ರಾಷ್ಟ್ರದಲ್ಲಿ ಮೂರನೆಯ ಪ್ರಬಲ ಶಕ್ತಿಯನ್ನಾಗಿ ರೂಪಿಸುವ ತಮ್ಮ ಪ್ರಯತ್ನಕ್ಕೆ ಇದರಿಂದ ತೀವ್ರ ಆಘಾತವಾದಂತಾಗಿದೆ ಎಂದು ದಳದ ಹಿರಿಯ ಮುಖಂಡ ರಾಮಕೃಷ್ಣ ಹೆಗಡೆ ವಿಷಾದ ವ್ಯಕ್ತಪಡಿಸಿದರು.