ದಳ ಇಬ್ಭಾಗವಾಗುವ ‘ಕಥೆ’ ಇನ್ನೂ ಮುಗಿದಿಲ್ಲ, ಅದು ಪುನಃ ಒಡೆಯುವ ಸೂಚನೆಗಳಿಗೆ ಎಂದು ಮಾಜಿ ಮುಖ್ಯಮಂತ್ರಿ ಹೆಗಡೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ನವಂಬರ್ನಲ್ಲಿ ಉತ್ತರದಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ದಳದ ಪುನರ್ ಸಂಘಟನೆ ಅಗತ್ಯವಿತ್ತು ಎಂದ ಅವರು ಜುಲೈ 29 ಹಾಗೂ 30 ರಂದು ನಡೆಯುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯ ನಂತರ ಪಕ್ಷ ಪುನಃ ಹೋಳಾಗಬಹುದು ಎಂದು ಭವಿಷ್ಯ ನುಡಿದರು.