ಭಾರೀ ಮಳೆ: ಅನೇಕ ಜಲಾಶಯ ಭರ್ತಿ
ಬೆಂಗಳೂರು,ಜುಲೈ13– ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕಾವೇರಿ, ನೇತ್ರಾವತಿ, ಕಪಿಲಾ, ಹೇಮಾವತಿ, ತುಂಗಾ, ಹಾರಂಗಿ,ವರದಾ,ಅಘನಾಶಿನಿ ಮತ್ತು ಗುಂಡಬಾಳ ನದಿಗಳು ತುಂಬಿ ಹರಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಮಳೆ ಮತ್ತು ಬಿರುಗಾಳಿಗೆ ಸಿಕ್ಕಿ ಸತ್ತವರ ಸಂಖ್ಯೆ ಏಳಕ್ಕೆ ಏರಿದೆ.