ಪನಜಿ, ಆ. 10 (ಯುಎನ್ಐ)– ಗೋವಾ ರಾಜ್ಯಪಾಲರ ನಿವಾಸ ರಾಜಭವನದಲ್ಲಿ ಇನ್ನು ಮುಂದೆ ಅತಿಥಿಗಳಿಗೆ ಮದ್ಯ ಪೂರೈಕೆ ಇಲ್ಲ. ಮದ್ಯ ಸೇವನೆ ಶಾಪಕ್ಕೆ ಆಹ್ವಾನ ಎಂಬುದು ಹೊಸ ರಾಜ್ಯಪಾಲ ಜಿ. ರಾಮಾನುಜಂ ಅವರ ಖಚಿತ ನಂಬಿಕೆ. ಆದ್ದರಿಂದ ಈ ನಿರ್ಧಾರ. ರಾಮಾನುಜಂ ಯುಎನ್ಐ ಜತೆ ಮಾತನಾಡುತ್ತಾ, ಜೂಜು, ಮದ್ಯ ಸೇವನೆಯಿಂದ ಸಿಗುವುದು ಬರೀ ಯಾತನೆ, ವಿನಾಶ ಎಂದರು.