ಇತ್ತೀಚೆಗೆ ಆ ಪ್ರದೇಶದಲ್ಲಿ ಹೆಚ್ಚಾಗಿರುವ ಬೀಡಾಡಿ ನಾಯಿಗಳನ್ನು ಕೊಲ್ಲಲು ಮೀಸಲು ಪಡೆಯ ಶೇಕಪ್ಪ ಹಲಸೂರ ಅವರು ಗುಂಡು ಹಾರಿಸಿದಾಗ, ನಾರಾಯಣಸಾ ಬದ್ದಿ ಎಂಬ ಬಾಲಕನ ಎದೆಗೆ ತಗುಲಿ ಕುಸಿದುಬಿದ್ದ. ತಕ್ಷಣ ಇಲ್ಲಿನ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರೂ ನಡು ಹಾದಿಯಲ್ಲಿಯೇ ಬಾಲಕ ಕೊನೆಯುಸಿರೆಳೆದ. ಮೃತ ಬಾಲಕನ ತಂದೆ ಪರಶುರಾಮ ಬದ್ದಿ ಹೆಡ್ಕಾನ್ಸ್ಟೆಬಲ್ ಆಗಿದ್ದಾರೆ.