ನವದೆಹಲಿ, ಫೆ. 27– ಎರಡು ಸಾವಿರನೇ ಇಸವಿಯೊಳಗೆ ಕರ್ನಾಟಕವು ಕೃಷ್ಣಾ ನದಿ ನೀರಿನಲ್ಲಿ ತನ್ನ ಪಾಲನ್ನು ಪೂರ್ಣವಾಗಿ ಬಳಸಿಕೊಳ್ಳಬೇಕಾಗಿರುವುದರಿಂದ ಕೃಷ್ಣಾ ಕಣಿವೆಯ ಯೋಜನೆಗಳನ್ನು ನಿಗದಿತ ವೇಳೆಯಲ್ಲಿ ಪೂರೈಸಲು ಸಹಾಯವಾಗುವಂತೆ ರೂ 500 ಕೋಟಿಯನ್ನು ಕೇಂದ್ರದ ವಿಶೇಷ ನೆರವಾಗಿ, ಇಲ್ಲವಾದರೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ನೆರವನ್ನಾಗಿ ನೀಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರವನ್ನು ಆಗ್ರಹಪಡಿಸಿದೆ.