ರಾಷ್ಟ್ರೀಯ ಭೂ ಸುಧಾರಣಾ ನೀತಿ ಜಾರಿಯಲ್ಲಿರುವಾಗ, ಪ್ರತ್ಯೇಕ ತಿದ್ದುಪಡಿ ಗಳನ್ನು ತರಲು ರಾಜ್ಯಗಳಿಗೆ ಅನುಮತಿ ನೀಡಬಾರದು. ರಾಷ್ಟ್ರೀಯ ಭೂ ಸುಧಾರಣಾ ಕಾಯ್ದೆಯಿಂದ ಪ್ರತ್ಯೇಕವಾಗಿ ಹೋಗಲು ರಾಜ್ಯಗಳಿಗೆ ಅನುಮತಿ ನೀಡಿ ದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸ್ಥಿತಿ ತಲೆದೋರಿ ‘ಅರಾಜಕತೆ’ ಉಂಟಾಗ ಬಹುದು ಎಂದು ಮಿಶ್ರಾ ತಮ್ಮ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.