ನವದೆಹಲಿ, ಅ. 8 (ಯುಎನ್ಐ, ಪಿಟಿಐ)– ಗುಜರಾತ್ ಬಿಜೆಪಿಯಲ್ಲಿ ಮತ್ತೆ ಬಿಕ್ಕಟ್ಟಿನ ಲಕ್ಷಣಗಳು ಕಂಡುಬಂದಿವೆ. ನಿನ್ನೆ ಸಂಧಾನದ ಫಲವಾಗಿ ಭಿನ್ನಮತ ಶಮನಗೊಂಡು ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಲು ಸಫಲರಾದ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರನ್ನು ಅಧಿಕಾರದಿಂದ ಇಳಿಸಿದರೆ ಬಂಡಾಯ ಏಳುವುದಾಗಿ ಪಟೇಲ್ ಬೆಂಬಲಿಗರು ಬಿಜೆಪಿ ವರಿಷ್ಠ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.