ನವದೆಹಲಿ, ಜೂನ್ 27 (ಪಿಟಿಐ, ಯುಎನ್ಐ)– ಜನತಾದಳದ ಬಿಕ್ಕಟ್ಟನ್ನು ಪರಿಹರಿಸಲು ಪಕ್ಷದ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರು ಕರೆದಿದ್ದ ಉಭಯ ಬಣಗಳ ಸಭೆಗೆ ವಿವಾದದ ಕೇಂದ್ರ ಬಿಂದುಗಳಾದ ಬಿಹಾರ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರು ಇಂದು ಹಾಜರಾಗಲಿಲ್ಲ. ಇದರಿಂದಾಗಿ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನಗಳಿಗೆ ಹಿನ್ನಡೆ ಉಂಟಾಗಿದೆ.