ಬೆಂಗಳೂರು, ಜುಲೈ 23– ಒಕ್ಕಲಿಗ ಜನಾಂಗದ ತೀವ್ರ ಪ್ರತಿಭಟನೆಯಿಂದ ಹಿಂಜರಿದಂತಾಗಿ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಎಂಬಂತೆ ರಾಜ್ಯ ಸರ್ಕಾರವು ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸಿನ ಅನ್ವಯ ಇತ್ತೀಚೆಗೆ ಹೊರಡಿಸಿದ್ದ ಮೀಸಲು ನೀತಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದುಳಿದ ವರ್ಗಗಳಿಗೆ ಮೀಸಲು ಪ್ರಮಾಣವನ್ನು ಶೇ 50ರಿಂದ 57ಕ್ಕೆ ಹೆಚ್ಚಿಸಿದೆ.