ಕ್ರಿಯಾವರದಿ ಪುನರ್ವಿಮರ್ಶೆಗೆ ಒಪ್ಪಿಗೆ ಪ್ರತಿಪಕ್ಷ ಸಂಸತ್ ಬಹಿಷ್ಕಾರ ಅಂತ್ಯನವದೆಹಲಿ, ಆ. 17 (ಪಿಟಿಐ, ಯುಎನ್ಐ)– ಷೇರು ಹಗರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ಶಿಫಾರಸುಗಳ ವಿಷಯದಲ್ಲಿ ಸರಕಾರದ ಕ್ರಿಯಾ ವರದಿಗೆ ಬಂದ ಪ್ರತಿಪಕ್ಷಗಳ ಆಕ್ಷೇಪಣೆಗಳನ್ನು ಸರಕಾರ ಭಾಗಶಃ ಒಪ್ಪಿಕೊಂಡ ಪರಿಣಾಮವಾಗಿ ಪ್ರತಿ ಪಕ್ಷಗಳು ಇಂದು ಸಂಸತ್ತಿನ ತಮ್ಮ 16 ದಿನಗಳ ಬಹಿಷ್ಕಾರವನ್ನು ಅಂತ್ಯ ಗೊಳಿಸಿ ಎರಡೂ ಸದನಗಳಿಗೆ ಹಾಜರಾದವು.