ಅಲ್ಲಿನ ಸ್ಥಿತಿ ಬಗ್ಗೆ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ರಾಜ್ಯ ಪಿಸಿಸಿ ಅಧ್ಯಕ್ಷ ಎನ್.ಡಿ. ತಿವಾರಿ,ಆಂತರಿಕ ಭದ್ರತೆ ಸಚಿವ ರಾಜೇಶ್ ಪೈಲಟ್, ಹತ್ತನೇ ಹಣಕಾಸು ಆಯೋಗದ ಅಧ್ಯಕ್ಷ ಕೆ.ಸಿ. ಪಂತ್, ಮಾಜಿ ಸಚಿವ ಅಜಿತ್ ಸಿಂಗ್, ಹರೀಶ್ ರಾವತ್ ಪಾಲ್ಗೊಂಡಿದ್ದರು. ಗುಡ್ಡಗಾಡು ಜಿಲ್ಲೆಗಳಿಗೆ ಸೇರಿದ ತಿವಾರಿ, ಪಂತ್ ಮತ್ತು ರಾವತ್ ಪರಿಸ್ಥಿತಿ ಹೇಗೆ ಹದಗೆಡುತ್ತಿದೆ ಎಂಬುದನ್ನು ವಿವರಿಸಿದರು.