ಪರಿಶಿಷ್ಟರಿಗೆ ಬಡ್ತಿಯಲ್ಲೂ ಮೀಸಲು ಸಂವಿಧಾನ ತಿದ್ದುಪಡಿಗೆ ವಿಧೇಯಕ
ನವದೆಹಲಿ, ಜೂನ್ 1 (ಪಿಟಿಐ)– ಸರ್ಕಾರಿ ಸೇವೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಿಬ್ಬಂದಿಗೆ ಬಡ್ತಿಯಲ್ಲೂ ಮೀಸಲು ಸೌಲಭ್ಯ ಮುಂದುವರಿಸುವ ಸಂವಿಧಾನದ 86ನೇ ತಿದ್ದುಪಡಿ ಮಸೂದೆಯನ್ನು ಸಂಬಂಧಿತ ಖಾತೆಯ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸದೇ ಒಪ್ಪಿಗೆ ನೀಡಬೇಕು ಎಂಬ ಸರ್ಕಾರದ ಕೋರಿಕೆಗೆ ಲೋಕಸಭೆ ಇಂದು ಸಮ್ಮತಿಸಿತು.