‘ಕನ್ನಡ ಸಂಸ್ಕೃತಿ ಮೇಲೆ ಟಿ.ವಿ ದಾಳಿ ಬಾಂಬ್ಗಿಂತ ಭೀಕರ’
ರನ್ನಮಂಟಪ, ಮಧುರ ಚೆನ್ನ ವೇದಿಕೆ, ಮುಧೋಳ, ಜೂನ್ 3– ‘ದೂರದರ್ಶನ ಹಾಗೂ ಉಪಗ್ರಹ ಚಾನೆಲ್ಗಳ ಮೂಲಕ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಬಾಂಬ್ ದಾಳಿಗಿಂತ ಉಪಗ್ರಹದ ರಾಶಿ ಬಹು ಅಪಾಯಕಾರಿಯಾಗಿದೆ. ಹೊಲಸು ಹಾಡು, ಅಸಂಬದ್ಧ ಕುಣಿತ ನಮ್ಮ ಯುವ ಪೀಳಿಗೆಯ ಮೇಲೆ ತೀವ್ರ ಪರಿಣಾಮ ಬೀರೀತು’ ಎಂದು 64ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಲ್.ನಾಗೇಗೌಡ ಇಂದು ಎಚ್ಚರಿಸಿದರು.