ತೆರೆದ ಎದೆ, ಬಿಗಿದು ಕಟ್ಟಿದ ಕಚ್ಚೆ ಪಂಚೆ, ಹೆಗಲ ಮೇಲಿಂದ ಧಾರೆಯಂತೆ ಇಳಿದ ಕಂಬಳಿ, ಕೈಯಲ್ಲಿ ಕೆಂಬಾವುಟ ಹಾರಿಸುತ್ತಾ, ಕ್ರಾಂತಿ ಕಹಳೆಯಂಥಾ ಸ್ವಾತಂತ್ರ್ಯದ ಕನಸನ್ನು ಚಿಗುರಿಸುವ ಈ ಅರ್ಥ ಮೂಡಿಬರುವ ಹಾಡೊಂದರ ಮೂಲಕ ಕ್ರಾಂತಿಕಾರಿ ಕವಿ, ಗಾಯಕ ಗದ್ದರ್ ಇಂದು ಜನೋತ್ಸವ ಹಾಗೂ ರಂಗ ನಿರಂತರ ಸಂಘಟಿಸಿದ ಸ್ವಾತಂತ್ರ್ಯ ಹಬ್ಬವನ್ನು ಉದ್ಘಾಟಿಸಿದರು.