ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿರುವುದು ಮುಖ್ಯ. ಪಕ್ಷವನ್ನು ಸಮರ್ಥವಾಗಿ ಹಾಗೂ ಬಲಿಷ್ಠವಾಗಿ ಬೆಳೆಸಬೇಕಿದ್ದರೆ
ತ್ಯಾಗ ಕೂಡ ಅಷ್ಟೇ ಮಹತ್ವದ್ದು. ಶತಮಾನದಷ್ಟು ಹಳೆಯದಾಗಿರುವ ಕಾಂಗೈ ಪಕ್ಷಕ್ಕೆ ಉನ್ನತ ಪರಂಪರೆ ಇದ್ದು, ಇಲ್ಲಿ ಶಿಸ್ತಿಗೆ ಮತ್ತು ಒಗ್ಗಟ್ಟಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರಲ್ಲದೆ,ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುವಂತೆ ಮಾಡಲು ತಾವು ಕೂಡ ಸಾಕಷ್ಟು ಶ್ರಮಿಸುವುದಾಗಿ ಘೋಷಿಸಿದರು.