ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಸೋಮವಾರ, 2–10–1995

Last Updated 1 ಅಕ್ಟೋಬರ್ 2020, 20:02 IST
ಅಕ್ಷರ ಗಾತ್ರ

ರಾಷ್ಟ್ರದಲ್ಲೇ ಪ್ರಥಮ ಕೃಷಿ ನೀತಿಗೆ ಅಂಗೀಕಾರ

ಬೆಂಗಳೂರು, ಅ. 1– ಕೃಷಿಗೆ ಕೈಗಾರಿಕೆಯ ಸ್ಥಾನಮಾನ ನೀಡುವ ಮೂಲಕ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ರೂಪಿಸಿರುವ ಮಹತ್ವಾಕಾಂಕ್ಷೆಯ ಕೃಷಿ ನೀತಿಯನ್ನು ಸರ್ಕಾರ ಅಂಗೀಕರಿಸಿದೆ. ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆ ಅಂದಾಜು 1,000 ಕೋಟಿ
ರೂಪಾಯಿ ಬಂಡವಾಳ ತೊಡಗಿಸುವ ಉದ್ದೇಶದೊಡನೆ ಈ ನೀತಿ ಜಾರಿಗಾಗಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗಿದೆ.

ಇಂದು ಇಲ್ಲಿ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದ ಕೃಷಿ ಸಚಿವ ಸಿ.ಬೈರೇಗೌಡ ಅವರು, ರಾಷ್ಟ್ರದಲ್ಲಿಯೇ ಕೃಷಿ ನೀತಿ ಅಳವಡಿಸಿಕೊಂಡ ಪ್ರಪ್ರಥಮ ರಾಜ್ಯ ನಮ್ಮದು ಎಂದು ಹೆಮ್ಮೆಪಟ್ಟರು.

ಕಟ್ಟಾ ಉಗ್ರರ ಶರಣು

ಶ್ರೀನಗರ, ಅ. 1 (ಪಿಟಿಐ, ಯುಎನ್‌ಐ)– ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಅರಗಾಂ ಮತ್ತು ಮಲಂಗಾಂಗಳಲ್ಲಿ ಇಂದು ಒಟ್ಟು 99 ಕಟ್ಟಾ ಉಗ್ರಗಾಮಿಗಳು ಶಸ್ತ್ರಾಸ್ತ್ರ ಸಹಿತ ಸೇನೆಗೆ ಶರಣಾಗಿ ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರುವ ಪಣತೊಟ್ಟರು.

ಅಕ್ರಮ ಗ್ರಾನೈಟ್‌: ಸಿಓಡಿ ತನಿಖೆಗೆ

ಬೆಂಗಳೂರು, ಅ. 1– ಕನಕಪುರ ತಾಲ್ಲೂಕಿನ ನಿಡುಗಲ್ಲು ಮತ್ತು ಯಡಮಾರನಹಳ್ಳಿಯ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಗ್ರಾನೈಟ್‌ ತೆಗೆದಿರುವ ‍ಪ್ರಕರಣಗಳನ್ನು ಪತ್ತೆ ಹಚ್ಚಿದ, ಗ್ರಾನೈಟ್‌ ಹಗರಣದ ಬಗ್ಗೆ ತನಿಖೆಗೆ ನೇಮಕಗೊಂಡಿರುವ ವಿಧಾನ ಮಂಡಲದ ಜಂಟಿ ಸದನ ಸಮಿತಿ ಕೆಲವನ್ನು ಸಿಓಡಿ ತನಿಖೆಗೆ ಒಪ್ಪಿಸಲು ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT