ರಾಜ್ಯದ ಗರಡಿ ಮನೆಗಳ ಜೀರ್ಣೋದ್ಧಾರಕ್ಕೆ ಕ್ರಮ
ಮೈಸೂರು, ಸೆ. 25– ರಾಜ್ಯದ ಎಲ್ಲಾ ಗರಡಿ ಮನೆಗಳ ಜೀರ್ಣೋದ್ಧಾರ ಮಾಡಲಾಗುವುದು, ಅಲ್ಲದೆ ರಾಷ್ಟ್ರ ಪ್ರಸಿದ್ಧ ಮೈಸೂರು ದಸರಾ ಕುಸ್ತಿ ಪಂದ್ಯದಲ್ಲಿ ವಿಜೇತರಾದ ಪೈಲ್ವಾನರುಗಳಿಗೆ ನೀಡಲಾಗುತ್ತಿರುವ ಬಹುಮಾನದ ಮೊತ್ತವನ್ನು ಎರಡುಪಟ್ಟು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.