ನವದೆಹಲಿ, ಸೆ. 15 (ಯುಎನ್ಐ)– ವಿವಾದಾತ್ಮಕ ಸಾಧು ಚಂದ್ರಸ್ವಾಮಿ ಅವರನ್ನು ಬಂಧಿಸಬೇಕು ಎಂದು ಗೃಹ ಖಾತೆ ರಾಜ್ಯ ಸಚಿವ ರಾಜೇಶ್ ಪೈಲಟ್ ಅವರು ಸಿಬಿಐಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ದಾವೂದ್ ಇಬ್ರಾಹಿಂ ಜತೆ ಅವರಿಗಿರುವ ಸಂಬಂಧದ ಬಗೆಗಿನ ಸಾಕ್ಷ್ಯಾಧಾರಗಳನ್ನು ಸರ್ಕಾರ ಪರಿಶೀಲಿಸತೊಡಗಿದೆ.