ತುಮಕೂರಿನಲ್ಲಿ ಇಂದು ರಾತ್ರಿ 90 ಲಕ್ಷ ರೂ. ವೆಚ್ಚದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರವನ್ನು ಉದ್ಘಾಟಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಡಾ. ರಾಜ್, ಹಿಂದೆ ಟಿ.ವಿ.ಯಲ್ಲಿ ‘ಟಿಪ್ಪೂ ಸುಲ್ತಾನ್’ ಕನ್ನಡ ಡಬ್ ಚಿತ್ರವನ್ನು ಪ್ರಸಾರ ಮಾಡಲು ನಿರ್ಧರಿಸಿದ್ದರು. ಆಗ ನಾನು ಚಳವಳಿ ಮಾಡುವುದಾಗಿ ಹೇಳಿ ಅದನ್ನು ತಪ್ಪಿಸಿದ್ದೆ ಎಂದು ಅಂದಿನ ಘಟನೆಯನ್ನು ಪ್ರಸ್ತಾಪಿಸಿದರು.