ನವದೆಹಲಿ, ಜುಲೈ 12 (ಯುಎನ್ಐ)– ಭಾರತದಲ್ಲಿ ಗೂಢಚರ್ಯೆ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನದ ಒಬ್ಬ ಹಿರಿಯ ರಾಜತಾಂತ್ರಿಕ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಭಾರತ ಇಂದು ಉಚ್ಚಾಟಿಸಿತು. ಇದಕ್ಕೆ ಪ್ರತೀಕಾರ ಎಂಬಂತೆ, ಭಾರತದ ರಾಜತಾಂತ್ರಿಕ ವಿ.ಎಸ್. ಚವಾಣ್ ಅವರು 7 ದಿನಗಳ ಒಳಗೆ ಇಸ್ಲಾಮಾಬಾದ್ ಬಿಟ್ಟು ತೊಲಗುವಂತೆ ಪಾಕಿಸ್ತಾನ ಇಂದು ಆದೇಶಿಸಿದೆ.