ಬೆಂಗಳೂರು, ಜುಲೈ 8– ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪವಿರುವ ಸಚಿವರಾದ ಗೋಪಿನಾಥ ಸಾಂಡ್ರಾ, ಎ.ಎಂ. ಹಿಂಡಸಗೇರಿ,ಮಾಜಿ ಸಚಿವ ಎಸ್.ಆರ್. ಮೋರೆ ಅವರಿಗೆ ವಿವರಣೆ ಕೋರಿ ನೋಟಿಸ್ ಜಾರಿಗೆ ಪ್ರದೇಶ ಕಾಂಗ್ರೆಸ್ (ಐ)ಸಮಿತಿಯ ಶಿಸ್ತು ಕ್ರಮ ಸಮಿತಿ ತೀರ್ಮಾನಿಸಿದೆ.