ಬೆಂಗಳೂರು, ಆ. 23– ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಭಾಧ್ಯಕ್ಷರು, ಸದನ ಹಾಗೂ ಎಲ್ಲ ಸದಸ್ಯರ ಬಗ್ಗೆ ಗೌರವ ಹೊಂದಿರುವುದಾಗಿ ಸ್ಪಷ್ಟಪಡಿಸಿ, ತಾವು ಆಡಿರುವ ಮನ ನೋಯಿಸುವಂತಹ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿರುವುದರಿಂದ ಅವರ ವಿರುದ್ಧದ ಹಕ್ಕುಚ್ಯುತಿ ನಿರ್ಣಯ ವಿಚಾರ ಬೆಳೆಸುವುದು ಸೂಕ್ತ ಅಲ್ಲ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಸದನದಲ್ಲಿ ಇಂದು ತೀರ್ಪು ನೀಡಿದರು.