ಮುಂಬೈ, ಮಾ. 1 (ಪಿಟಿಐ)– ‘ಅಮರ್ ಅಕ್ಬರ್ ಆಂಟನಿ’ಯಂತಹ ಜನಪ್ರಿಯ ಹಿಂದಿ ಚಿತ್ರಗಳನ್ನು ನಿರ್ಮಿಸಿದಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಮನಮೋಹನ್ ದೇಸಾಯಿ ಇಂದು ಮಧ್ಯಾಹ್ನ ತಮ್ಮ ನಿವಾಸದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದರು. ದೇಸಾಯಿ ಅವರ ನಿಧನ ಸುದ್ದಿ ತಿಳಿಯುತ್ತಲೇ ಹಿಂದಿ ಚಲನಚಿತ್ರರಂಗದ ಗಣ್ಯರುಮಧ್ಯ ಮುಂಬೈನ ಖೆಟ್ವಾಡಿಯಲ್ಲಿ ಇರುವ ಅವರ ನಿವಾಸ ‘ಜೀವನ್ ಸಂಕೀರ್ಣ’ಕ್ಕೆ ಧಾವಿಸಿದರು.